ಹೈದರಾಬಾದ್: ಹೈದರಾಬಾದ್ನಲ್ಲಿರುವ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿನ ಬ್ಯಾಡ್ಮಿಂಟನ್ ರಾಷ್ಟ್ರೀಯ ಕ್ಯಾಂಪ್ನಿಂದ ಪತಿ ಪಾರುಪಳ್ಳಿ ಕಶ್ಯಪ್ ಅವರನ್ನು ಹೊರಗಿಟ್ಟಿದ್ದಕ್ಕೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಸಮಾಧಾನಗೊಂಡಿದ್ದಾರೆ.
ಐಪಿಎಲ್: ಆರ್ಸಿಬಿ ತಂಡದಲ್ಲಿದ್ದರೂ ಒಮ್ಮೆಯೂ ಬೆಂಗಳೂರು ಪರ ಕಣಕ್ಕಿಳಿಯದ 5 ಪ್ರಖ್ಯಾತ ಆಟಗಾರರು
ಆಗಸ್ಟ್ 7ರಿಂದ ಆರಂಭಗೊಳ್ಳಲಿರುವ ಬ್ಯಾಡ್ಮಿಂಟನ್ ರಾಷ್ಟ್ರೀಯ ಕ್ಯಾಂಪ್ಗೆ ಸೈನಾ ಇನ್ನೂ ಸೇರಿಕೊಂಡಿಲ್ಲ. ಪತಿ ಕಶ್ಯಪ್ಗೆ ಕ್ಯಾಂಪ್ಗೆ ಅವಕಾಶ ನೀಡದ್ದಕ್ಕೆ ಸೈನಾ ಅವರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ವಿರುದ್ಧ ಕೋಪಗೊಂಡಿದ್ದಾರೆ ಎನ್ನಲಾಗಿದೆ.
ಐಪಿಎಲ್ 2020; ತಂಡದ ಕಿಟ್ನ ಫಸ್ಟ್ಲುಕ್ ಬಿಡುಗಡೆ ಮಾಡಿದ ಆರ್ಸಿಬಿ
ಟೋಕಿಯೋ ಒಲಿಂಪಿಕ್ಗೆ ಸಂಭಾವ್ಯ ಬ್ಯಾಡ್ಮಿಂಟನ್ ಆಟಗಾರರ ಪಟ್ಟಿಯಲ್ಲಿ ಪಾರುಪಳ್ಳಿ ಕಶ್ಯಪ್ ಹೆಸರೂ ಇತ್ತು. ಸದ್ಯ ಸೈನಾ ಮತ್ತು ಕಶ್ಯಪ್ ಅವರು ಗೋಪಿಚಂದ್ ಅಕಾಡೆಗೆ ಹತ್ತಿರದಲ್ಲಿ ಬೇರೊಂದು ಬ್ಯಾಡ್ಮಿಂಟನ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಾರ್ಸಿಲೋನಾ ತೊರೆಯಲು ಸಜ್ಜಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ
ಕೆಲ ಇನ್ನಿತರ ರಾಷ್ಟ್ರೀಯ ಆಟಗಾರರ ಜೊತೆಗೆ ಸೈನಾ ಮತ್ತು ಕಶ್ಯಪ್ ಅಭ್ಯಾಸ ನಡೆಸುತ್ತಿದ್ದಾರೆ. ರಾಷ್ಟ್ರೀಯ ಕ್ಯಾಂಪ್ಗೆ ಹೆಸರಿಸಲ್ಪಟ್ಟ 8 ಮಂದಿಯಲ್ಲಿ 4 ಮಂದಿ ಮಾತ್ರ (ಪಿವಿ ಸಿಂಧು, ಕಿದಂಬಿ ಶ್ರೀಕಾಂತ್, ಬಿ ಸಾಯ್ ಪ್ರಣೀತ್, ಎನ್ ಸಿಕ್ಕಿ ರಡ್ಡಿ) ರಾಷ್ಟ್ರೀಯ ಕ್ಯಾಂಪ್ನಲ್ಲಿ ವರದಿ ಮಾಡಿಕೊಂಡಿದ್ದಾರೆ.