ನವದೆಹಲಿ, ಜೂನ್ 2: ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಅಮಿತ್ ಪಂಘಲ್ ಮತ್ತು ವಿಕಾಸ್ ಕ್ರಿಶನ್ ಹೆಸರುಗಳನ್ನು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ವರ್ಣಬೇಧ ನೀತಿ ಬರೀ ಫುಟ್ಬಾಲ್ನಲ್ಲಲ್ಲ, ಕ್ರಿಕೆಟ್ನಲ್ಲೂ ಇದೆ: ಕ್ರಿಸ್ ಗೇಲ್
ಪುರುಷರ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ, ಏಷ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಂಘಲ್ ಯಾವುದೇ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿಲ್ಲ. ಮೂರು ವರ್ಷಗಳಿಗೆ ಹಿಂದೆ ಅರ್ಜುನ ಪ್ರಶಸ್ತಿಗೆ ಅಮಿತ್ ಹೆಸರು ಶಿಫಾರಸಾಗುವುದರಲ್ಲಿತ್ತಾದರೂ 2012ರ ಡೋಪಿಂಗ್ ವಿವಾದದರಿಂದಾಗಿ ಅಂತಿಮ ಪಟ್ಟಿಯಲ್ಲಿ ಪರಿಗಣಿಸಲಾಗಿರಲಿಲ್ಲ.
ಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್: ತಮಾಷೆಯ ಮೀಮ್ಸ್ ಇಲ್ಲಿವೆ
ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ ಕ್ರಿಶನ್, 2012ರಲ್ಲಿ ಅರ್ಜುನ್ ಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ಬಿಎಫ್ಐಯು ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ ಲೊವ್ಲಿನಾ ಬೊರ್ಗೊಹೈನ್ (69 ಕೆಜಿ), ಸಿಮ್ರನ್ಜಿತ್ ಕೌರ್ (64 ಕೆಜಿ) ಮತ್ತು ಮನೀಶ್ ಕೌಶಿಕ್ (63 ಕೆಜಿ) ಹೆಸರುಗಳನ್ನು ಅರ್ಜುನ ಪ್ರಶಸ್ತಿ ನಾಮನಿರ್ದೇಶಿಸಿದೆ.
ಡೆನ್ಮಾರ್ಕ್ ಟೆನಿಸ್ ಸುಂದರಿಯ 'ಬಾಡಿ ಪೇಂಟಿಂಗ್' ಸ್ವಿಮ್ ಸೂಟ್ ಖುಲ್ಲಂಖುಲ್ಲಾ
ದ್ರೋಣಾಚಾರ್ಯ ಪ್ರಶಸ್ತಿಗೆ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ತಂಡದ ಕೋಚ್ ಮೊಹಮ್ಮದ್ ಅಲಿ ಕಮರ್ ಮತ್ತು ಸಹ ಕೋಚ್ ಛೋಟೆ ಲಾಲ್ ಯಾದವ್ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.