ಕೋಲಂಬೋ, ಆಗಸ್ಟ್, 29: ಭಾರತದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರಾ ಅವರ ಶತಕದ ನೆರವಿನಿಂದ ಭಾರತ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಮೂನ್ನೂರರ ಗಡಿ ಸಮೀಪಿಸಿದೆ.
ಶುಕ್ರವಾರ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಶನಿವಾರ ಕುಸಿಯುತ್ತಿದ್ದ ಭಾರತಕ್ಕೆ ಪೂಜಾರಾ ಅಜೇಯ 135 ರನ್ ಗಳಿಸಿ ನೆರವಾದರು. ದಿನದ ಅಂತ್ಯಕ್ಕೆ ಭಾರತ 292 ರನ್ ಗೆ 8 ವಿಕೆಟ್ ಕಳೆದುಕೊಂಡಿದೆ.[ಶುಕ್ರವಾರ ಮಳೆ ಅಡ್ಡಿ]
ಗಾಯಾಳು ಮುರಳಿ ವಿಜಯ್ ಬದಲು ತಂಡ ಸೇರಿಕೊಂಡ ಪೂಜಾರಾ ಭಾರತಕ್ಕೆ ಆಪತ್ಭಾಂದವರಾದರು. ಅಮಿತ್ ಮಿಶ್ರಾ ಸಹ ಅರ್ಧ ಶತಕ ದಾಖಲಿಸಿ ಭಾರತದ ಮೊತ್ತ ಹೆಚ್ಚಲು ಕಾರಣರಾದರು. ಭಾರತದ ಪ್ರಮುಖ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದರು. ನಾಯಕ ಕೊಹ್ಲಿ, ರೋಹಿತ್ ಶರ್ಮಾ ಅವರಿಂದಲೂ ಹೆಚ್ಚಿನ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಶ್ರೀಲಂಕಾ ಪರ ಪ್ರಸಾದ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಭಾನುವಾರ ಬೆಳಗ್ಗೆ ಭಾರತ ಎಷ್ಟು ರನ್ ಕಲೆ ಹಾಕಿ ಶ್ರೀಲಂಕಾಕ್ಕೆ ಬಿಟ್ಟುಕೊಡುತ್ತದೆ ಎಂಬುದನ್ನು ಕಾದು ನೋಡಬಬೇಕಿದೆ. ದಿನದ ಶ್ರೇಯ ಶತಕ ವೀರ ಚೇತೇಶ್ವರವ ಪೂಜಾರಾ ಅವರಿಗೆ ಸಲ್ಲುತ್ತದೆ.