1. ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್, ಈಗ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ಪ್ರಕಾರ 2022ರ ಮೆಗಾ ಆಕ್ಷನ್ ವೇಳೆ ವಿರಾಟ್ ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆ. ಐಪಿಎಲ್ ಆರಂಭದಿಂದಲೂ ಕೊಹ್ಲಿ ಆರ್ಸಿಬಿ ತಂಡದಲ್ಲಿದ್ದಾರೆ. ಈಗ ಆರ್ಸಿಬಿ ನಾಯಕರಾಗಿರುವ ಕೊಹ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಕೂಡ ಹೌದು. ಹೀಗಾಗಿ ಕೊಹ್ಲಿಯನ್ನು ಆರ್ಸಿಬಿ ಬಿಟ್ಟುಕೊಡುವ ಸಾಧ್ಯತೆಯಿಲ್ಲ ಎಂದು ಚೋಪ್ರಾ ಊಹಿಸಿದ್ದಾರೆ.
(ಕೊಹ್ಲಿ ಐಪಿಎಲ್ ಸಾಧನೆ: 199 ಪಂದ್ಯಗಳಲ್ಲಿ 6076 ರನ್).
2. ಎಬಿ ಡಿ ವಿಲಿಯರ್ಸ್
ಐಪಿಎಲ್ ಮಹಾ ಹರಾಜಿಗೂ ಮುನ್ನ ಕೇವಲ ಒಬ್ಬ ವಿದೇಶಿ ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿರುವುದರಿಂದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳಲಿದೆ. ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ಅನೇಕ ಸಾರಿ ಆರ್ಸಿಬಿ ಪಾಲಿಗೆ ಆಪಾದ್ಭಾಂಧವರಾಗಿ ಕಾಣಿಸಿಕೊಂಡಿದ್ದವರು.
(ಎಬಿಡಿ ಐಪಿಎಲ್ ಸಾಧನೆ: 176 ಪಂದ್ಯಗಳಲ್ಲಿ 5056 ರನ್).
3. ಯುಜುವೇಂದ್ರ ಚಾಹಲ್
ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಲೆಗ್ ಸ್ಪಿನ್ನರ್ ಯುಜಯವೇಂದ್ರ ಚಾಹಲ್ ಈಗ ಆರ್ಸಿಬಿ ತಂಡದಲ್ಲಿದ್ದಾರೆ. ಈಚಿನ ದಿನಗಳಲ್ಲಿ ಬೌಲಿಂಗ್ ವಿಚಾರದಲ್ಲಿ ಚಾಹಲ್ ಕೊಂಚ ಪ್ರಖರತೆ ಕಳೆದುಕೊಂಡಿದ್ದಾರಾದರೂ ಅವರು ಪ್ರತಿಭಾನ್ವಿತ ಬೌಲರ್ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಚಾಹಲ್ ಆರ್ಸಿಬಿಯಲ್ಲೇ ಉಳಿಯುತ್ತಾರೆ ಎಂದು ಆಕಾಶ್ ಚೋಪ್ರಾ ಊಹಿಸಿದ್ದಾರೆ.
(ಚಾಹಲ್ ಐಪಿಎಲ್ ಸಾಧನೆ: 106 ಪಂದ್ಯಗಳಲ್ಲಿ 125 ವಿಕೆಟ್).
4. ದೇವದತ್ ಪಡಿಕ್ಕಲ್
ಕರ್ನಾಟಕ ರಣಜಿ ತಂಡದಲ್ಲಿ ಆಡುವ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಆಕಾಶ್ ಚೋಪ್ರಾ ತನ್ನ ಆಯ್ಕೆ ಪಟ್ಟಿಯಲ್ಲಿ ಹೆಸರಿಸಿದ್ದಾರೆ. ದೇಸಿ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರ್ಇಬಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಪಡಿಕ್ಕಲ್ ಅವರನ್ನು ಆರ್ಸಿಬಿ ಬಿಟ್ಟುಕೊಡುವ ಸಾಧ್ಯತೆಯಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
(ಪಡಿಕ್ಕಲ್ ಐಪಿಎಲ್ ಸಾಧನೆ: 21 ಐಪಿಎಲ್ ಪಂದ್ಯಗಳಲ್ಲಿ 668 ರನ್, 1 ಶತಕ).