ನಾಯಕನಾಗಿ ಶಿಖರ್ ಧವನ್
ಶ್ರೀಲಂಕಾ ವಿರುದ್ಧದ ಈ ಸರಣಿಗೆ ನಾಯಕ ಯಾರು ಎಂಬುದು ಈಗ ಪ್ರಮುಖವಾಗಿರುವ ಪ್ರಶ್ನೆಯಾಗಿದೆ. ಅನುಭವಿ ಶಿಖರ್ ಧವನ್ ಹಾಗೂ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರಿಗಳಾಗಿದೆ. ಆಕಾಶ್ ಚೋಪ್ರಾ ಅನುಭವಿ ಶಿಖರ್ ಧವನ್ ಅವರನ್ನು ನಾಯಕತ್ವಕ್ಕೆ ಸೂಕ್ತ ಎಂದು ಪರಿಗಣಿಸಿದ್ದಾರೆ.
ಮಧ್ಯಮ ಹಾಗೂ ಕೆಳ ಕ್ರಮಾಂಕ
ಇನ್ನು ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರನ್ನು ಚೋಪ್ರಾ ಆಯ್ಕೆ ಮಾಡಿದರೆ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರನ್ನು ಹೆಸರಿಸಿದ್ದಾರೆ. ಇಬ್ಬರು ಆಲ್ರೌಂಡರ್ಗಳ ಬಲ ತಂಡಕ್ಕೆ ದೊರೆಯಲಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಉಪನಾಯಕನ ಸ್ಥಾನಕ್ಕೆ ಸೂಕ್ತ ಎಂದಿದ್ದಾರೆ ಆಕಾಶ್ ಚೋಪ್ರ.
ಬಲಿಷ್ಠ ಬೌಲಿಂಗ್ ಪಡೆ
ಆಡುವ ಬಳಗದಲ್ಲಿ ಬೌಲರ್ಗಳಾಗಿ ಯುಜುವೇಂದ್ರ ಚಾಹಲ್, ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಪ್ರಮುಖ ಬೌಲರ್ಗಳಾಗಿ ಆಕಾಶ್ ಚೋಪ್ರ ಹೆಸರಿದ್ದಾರೆ. ಒಟ್ಟು 17 ಆಟಗಾರರ ಸಂಭಾವ್ಯ ತಂಡವನ್ನು ಆಕಾಶ್ ಚೋಪ್ರ ಈ ಪ್ರವಾಸಕ್ಕೆ ಹೆಸರಿಸಿದ್ದಾರೆ. ಗಾಯಗೊಂಡಿರುವ ಶ್ರೇಯಸ್ ಐಯ್ಯರ್, ಟಿ ನಟರಾಜನ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಮೀಸಲು ಬೌಲರ್ ಆಗಿ ಆಯ್ಕೆಯಾಗಿರುವ ಪ್ರಸಿದ್ಧ ಕೃಷ್ಣ ಅವರನ್ನು ಚೋಪ್ರ ಈ ತಂಡದಲ್ಲಿ ಹೆಸರಿಸಿದ್ದು ಈ ಆಟಗಾರರು ಶ್ರೀಲಂಕಾ ಪ್ರವಾಸದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿದೆ.
ಚೋಪ್ರ ಹೆಸರಿಸಿದ ಟೀಮ್ ಇಂಡಿಯಾ ಸಂಭಾವ್ಯ ತಂಡ
ಆಕಾಶ್ ಚೋಪ್ರ ಹೆಸರಿಸಿದ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾ ಸ್ಕ್ವಾಡ್:
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಕೃನಾಲ್ ಪಾಂಡ್ಯ, ಯುಜುವೇಂದ್ರ ಚಾಹಲ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಟಿ ನಟರಾಜನ್, ರಾಹುಲ್ ಚಾಹರ್, ವರುಣ್ ಚಕ್ರವರ್ತಿ, ಸಂಜು ಸ್ಯಾಮ್ಸನ್, ದೀಪಕ್ ಹೂಡ, ಪ್ರಸಿದ್ಧ್ ಕೃಷ್ಣ