ಏಕದಿನ ಮಾದರಿ ಅರ್ಥವಿಲ್ಲದಂತಾಗಿದೆ
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಏಕದಿನ ಕ್ರಿಕೆಟ್ ಅರ್ಥಹೀನವಾಗಿದೆ ಎಂದಿದ್ದಾರೆ. ಪ್ರಸಾರಕರು ಮತ್ತು ಅಭಿಮಾನಿಗಳು ಇಬ್ಬರು ಕೂಡ ಈ ಮಾದರಿಯನ್ನು ಆನಂದಿಸುತ್ತಿಲ್ಲ. ಯಾರನ್ನು ಕೂಡ ಹೆಚ್ಚಾಗಿ ಈ ಮಾದರಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಲ್ಲದೆ ವಿಶ್ವಕಪ್ಗಳಲ್ಲಿ ಮಾತ್ರವೇ ಟಿ20 ಪಂದ್ಯಗಳನ್ನಾಡಿದರೆ ಆ ಸಂದರ್ಭದಲ್ಲಿ ಆಟಗಾರರ ಹೊಂದಾಣಿಕೆಗೂ ಸಮಯ ಸಾಕಾಗುವುದಿಲ್ಲ ಎಂದಿದ್ದಾರೆ.
ಏಕದಿನ ಮಾದರಿ ಬೋರಿಂಗ್
ಆಸಕ್ತಿಯ ಮಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಟೆಸ್ಟ್ ಮಾದರಿಯನ್ನು ನಾನು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಯೊಂದನ್ನು ವಾಣಿಜ್ಯದ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಆದರೆ ನನ್ನ ಪ್ರಕಾರ ಏಕದಿನ ಕ್ರಿಕೆಟ್ ಮಾದರಿ ಅತ್ಯಂತ ಬೋರಿಂಗ್ ಕ್ರಿಕೆಟ್ ಮಾದರಿಯಾಗಿದೆ. ಅದು ಹೆಚ್ಚು ಅರ್ಥವಿಲ್ಲದಂತಾಗಿದೆ. ಪ್ರೇಕ್ಷಕರು ನೆನಪಿನಲ್ಲಿಟ್ಟುಕೊಳ್ಳದಂತಾ ಮಾದರಿ ಏಕದಿನ ಎನಿಸುತ್ತದೆ. ನನ್ನ ಪ್ರಕಾರ ಏಕದಿನ ಕ್ರಿಕೆಟ್ ಮಾದರಿ ಹೆಣಗಾಡುತ್ತಿದೆ. ಟಿ20 ಅಲ್ಲ. ಅಂತಾರಾಷ್ಟ್ರೀಯ ಟಿ20 ಮಾದರಿಗಳಿಗೆ ಅವಕಾಶವನ್ನು ನೀಡಬೇಕು. ಯಾಕೆಂದರೆ ಪ್ರಸಾರಕರಿಗೆ ಅದು ಅಗತ್ಯವಿದೆ. ಇಲ್ಲವಾದರೆ ಅವರು ನಿಮಗೆ ಹಣ ನೀಡುವುದಿಲ್ಲ. ಪ್ರತಿ ರಾಷ್ಟ್ರದ ಬ್ರಾಡ್ಕಾಸ್ಟ್ ಮೊತ್ತ ಪ್ರಮುಖವಾಗುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.
ಟಿ20 ಮಾದರಿ ಮುಂದುವರಿಯಬೇಕು
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ "ನನ್ನ ಪ್ರಕಾರ ಟಿ20 ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರಿಯಬೇಕು. ಯಾಕೆಂದರೆ ಅಂತಾರಾಷ್ಟ್ರೀಯ ವಿಶ್ವಕಪ್ ಎರಡು ವರ್ಷಕ್ಕೊಮ್ಮೆ ಆಯೋಜನೆಯಾಗುತ್ತದೆ. ಈ ಟೂರ್ನಮೆಂಟ್ಗೆ ಸಿದ್ಧತೆಯನ್ನು ನಡೆಸುವುದಕ್ಕೆ ಹೆಚ್ಚಿನ ಸಮಯ ದೊರೆಯುವುದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ರವಿ ಶಾಸ್ತ್ರಿ ಹೇಳಿದ್ದೇನು?
ಮಾಜಿ ಕೋಚ್ ಹಾಗೂ ಕ್ರಿಕೆಟಿಗ ರವಿ ಶಾಸ್ತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಕ್ರಿಕೆಟ್ಗೆ ಹೆಚ್ಚಿನ ಪಾಧಾನ್ಯತೆ ನೀಡುವ ಅಗತ್ಯವಿಲ್ಲ ಎಂದಿದ್ದರು. ಅಲ್ಲದೆ ಫುಟ್ಬಾಲ್ ಮಾದರಿಯಲ್ಲಿ ವಿಶ್ವಕಪ್ನಲ್ಲಿ ಮಾತ್ರವೇ ಟಿ20 ಕ್ರಿಕೆಟ್ ಮಾದರಿಯನ್ನು ಆಡಿಬೇಕು. ದ್ವಿಪಕ್ಷೀಯ ಸರಣಿಗಳ ಅಗತ್ಯವಿಲ್ಲ. ಅದರ ಬದಲಾಗಿ ಲೀಗ್ ಕ್ರಿಕೆಟ್ಗಳನ್ನು ಹೆಚ್ಚಾಗಿ ಆಡಿಸಬೇಕು" ಎಂದು ರವಿ ಶಾಸ್ತ್ರಿ ಹೇಳಿಕೊಂಡಿದ್ದರು.