ಬೆಂಗಳೂರು, ಫೆಬ್ರವರಿ 07: ರಣಜಿ ಟ್ರೋಫಿ ಉಳಿಸಿಕೊಂಡಿರುವ ಹಾಲಿ ಚಾಂಪಿಯನ್ ವಿದರ್ಭ ತಂಡದ ವಿರುದ್ಧ ಆಡಲಿರುವ ಶೇಷ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕರಾಗಿ ಇರಾನಿ ಕಪ್ ನಲ್ಲಿ ಮುನ್ನಡೆಸಲಿದ್ದಾರೆ. ಫೆ.12ರಂದು ಪಂದ್ಯ ನಡೆಯಲಿದೆ.
ನಾಗ್ಪುರ್ ರ ವಿಸಿಎ ಸ್ಟೇಡಿಯಂನಲ್ಲಿ ರಣಜಿ ಟ್ರೋಫಿ ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು 78ರನ್ ಗಳಿಂದ ಸೋಲಿಸಿದ ವಿದರ್ಭ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಸಿಎ ಸ್ಟೇಡಿಯಂನಲ್ಲಿ ಶೇಷ ಭಾರತ ಹಾಗೂ ರಣಜಿ ಚಾಂಪಿಯನ್ ವಿರುದ್ಧದ ಇರಾನಿ ಕಪ್ ಪಂದ್ಯ ನಡೆಯಲಿದೆ.
ಶೇಷ ಭಾರತ ತಂಡ : ಅಜಿಂಕ್ಯ ರಹಾನೆ(ನಾಯಕ), ಮಯಾಂಕ್ ಅಗರವಾಲ್, ಅನ್ಮೋಲ್ ಪ್ರೀತ್ ಸಿಂಘ್, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಧರ್ಮೇಂದ್ರ ಸಿಂಗ್ ಜಡೇಜ, ರಾಹುಲ್ ಚಾಹರ್, ಅಂಕಿತ್ ರಾಜ್ ಪೂತ್, ತನ್ವೀರ್ ಉಲ್ ಹಕ್, ರೋನಿತ್ ಮೋರೆ, ಸಂದೀಪ್ ವಾರಿಯರ್, ರಿಂಕು ಸಿಂಗ್, ಸ್ನೇಲ್ ಪಟೇಲ್.
ಇದೇ ವೇಳೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ 'ಎ' ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ 'ಎ' ತಂಡಕ್ಕೆ ಕೆಎಲ್ ರಾಹುಲ್ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕೆಎಲ್ ರಾಹುಲ್ (ನಾಯಕ), ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಲ್, ಅಂಕಿತ್ ಭಾವ್ನೆ, ಕರುಣ್ ನಾಯರ್, ರಿಕಿ ಭೂಯಿ, ಸಿದ್ದೇಶ್ ಲಾಡ್, ಕೆಎಸ್ ಭರತ್ (ವಿಕೆಟ್ ಕೀಪರ್), ಶಾಬಾಜ್ ನದೀಂ, ಜಲಜ್ ಸಕ್ಸೇನಾ, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವರುನ್ ಅರೋನ್.