ಅಲ್ಲಿಂದಲೇ ಅವನತಿ ಆರಂಭ
ಅದಾದ ಬಳಿಕವೂ ಸೈಮಂಡ್ಸ್ ಹಲವು ಕಡೆ ಈ ವಿವಾದವನ್ನು ಪ್ರಸ್ತಾಪಿಸಿದ್ದರು. 'ಹರ್ಭಜನ್ ನನ್ನನ್ನು ಎರಡು ಮೂರು ಬಾರಿ ಮಂಗ ಎಂದು ನಿಂದಿಸಿದ್ದರು' ಎಂಬುದಾಗಿ ಅವರು ಹೇಳಿದ್ದಾರೆ.
'ಆ ಘಟನೆಯ ಬಳಿಕ ನನ್ನ ಕ್ರೀಡಾ ಬದುಕಿನ ಅವನತಿಯ ಆರಂಭವಾಯಿತು' ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪಾಪ ಬೂಮ್ರಾ! ಆಡಲು ಮೊಬೈಲ್ ಇಲ್ಲದೆ ಒಂಟಿಯಾದರು: ಟ್ವಿಟ್ಟರ್ನಲ್ಲಿ ತಮಾಷೆ
ಕಾಡಿದ ತಪ್ಪಿತಸ್ಥ ಮನೋಭಾವ
ತಮ್ಮನ್ನು ಜನಾಂಗೀಯವಾಗಿ ನಿಂದಿಸಲಾಗಿದೆ ಎಂದು ಸಹ ಆಟಗಾರರು ತಮ್ಮ ಬೆಂಬಲಕ್ಕೆ ಬರಬೇಕಾಗಿದ್ದರಿಂದ ಅವರೂ ಈ ವಿವಾದದಲ್ಲಿ ಒಳಗೊಳ್ಳಬೇಕಾಯಿತು ಎನ್ನುವ ತಪ್ಪಿತಸ್ಥ ಮನೋಭಾವ ಕಾಡಿತ್ತು.
ಇದರ ಪರಿಣಾಮವಾಗಿ ನಾನು ವಿಪರೀತವಾಗಿ ಕುಡಿಯಲು ಆರಂಭಿಸಿದ್ದೆ. ನನ್ನ ಬದುಕು ಅಲ್ಲಿಂದ ಹಾಳಾಗಲು ಆರಂಭವಾಯಿತು.
ನಾನು ಈ ವಿವಾದವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಿಲ್ಲ. ಈ ವಿವಾದದಲ್ಲಿ ನನ್ನ ಸಹ ಆಟಗಾರರನ್ನು ಎಳೆದು ತಂದಿದ್ದಕ್ಕಾಗಿ ನನ್ನಲ್ಲಿ ತಪ್ಪಿತಸ್ಥ ಭಾವನೆ ಕಾಡತೊಡಗಿತು. ಅವರನ್ನು ಇದರಲ್ಲಿ ಎಳೆದು ತರಬಾರದಾಗಿತ್ತು ಎಂದು ಸೈಮಂಡ್ಸ್ ಹೇಳಿದ್ದಾರೆ.
ಧೋನಿ ನಿವೃತ್ತಿಯಿಲ್ಲ, ಅವರು ಏಕದಿನ ತಂಡದ ಅವಿಭಾಜ್ಯ ಅಂಗ: ವಿರಾಟ್ ಕೊಹ್ಲಿ
ಕುಡಿದು ಗಲಾಟೆ ಮಾಡಿದ್ದರು
ಮದ್ಯ ಸೇವಿಸಿ ನಡೆದ ಗಲಾಟೆಯೊಂದರ ಘಟನೆ ಬಳಿಕ ವಿಶ್ವಕಪ್ ಟಿ20 ಸರಣಿಯಿಂದ ಅವರನ್ನು ತವರಿಗೆ ಮರಳಿ ಕಳುಹಿಸಲಾಗಿತ್ತು. 2009ರ ಜೂನ್ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ, ಸೈಮಂಡ್ಸ್ ಅವರೊಂದಿಗಿನ ಒಪ್ಪಂದವನ್ನು ಹಿಂದಕ್ಕೆ ಪಡೆದುಕೊಂಡಿತ್ತು.
ಭಾರತದಲ್ಲಿಯೂ ಬೈಯ್ದಿದ್ದರು
ಹರ್ಭಜನ್ ಸಿಂಗ್ ತಮ್ಮನ್ನು ನಿಂದಿಸಿರುವುದು ಅದೇ ಮೊದಲ ಸಲವೇನಲ್ಲ ಎಂದು ಸೈಮಂಡ್ಸ್ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಆ ಸರಣಿಗೂ ಮುನ್ನ ಭಾರತದಲ್ಲಿ ನಡೆದ ಸರಣಿಯ ವೇಳೆಯಲ್ಲಿಯೂ ಹರ್ಭಜನ್ ನನ್ನನ್ನು 'ಮಂಗ' ಎಂದು ಕರೆದಿದ್ದರು ಎಂಬುದಾಗಿ ಸೈಮಂಡ್ಸ್ ಹೇಳಿದ್ದಾರೆ.
'ಬಳಿಕ ಅವರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿ, ಹರ್ಭಜನ್ ಜೊತೆ ಹೊರಗೆ ಮಾತನಾಡಬಹುದೇ ಎಂದು ಕೇಳಿದ್ದೆ. ಅವರು ಹೊರಕ್ಕೆ ಬಂದಿದ್ದರು. ಆಗ, ಈ ರೀತಿ ಕರೆಯುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಹೇಳಿದ್ದೆ' ಎಂದು ಹೇಳಿಕೊಂಡಿದ್ದಾರೆ.
ಮತ್ತೆ ಜತೆಗೂಡಿ ಆಡಿದ್ದರು
ಆದರೆ, ಈ ಎಲ್ಲ ವಿವಾದಗಳ ಬಳಿಕವೂ ಹರ್ಭಜನ್ ಮತ್ತು ಸೈಮಂಡ್ಸ್ ಜತೆಯಾಗಿ ಆಡಿದ್ದರು. ಹರ್ಭಜನ್ ಜತೆಯಲ್ಲಿಯೇ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಇದಾದ ಬಳಿಕ ಅವರ ನಡುವೆ ಮತ್ತೆ ಜಗಳ ನಡೆದ ಘಟನೆಗಳು ವರದಿಯಾಗಿಲ್ಲ.