ಎರಡು ವರ್ಷಗಳಿಂದ ನಿಯಮ ಜಾರಿಯಲ್ಲಿದೆ
ಫಿಲಿಫ್ ಹ್ಯೂಸ್ ನಿಧನದ ನಂತರ ಕಳೆದ ಎರಡು ವರ್ಷಗಳಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಯಾರಾದರೂ ತಲೆಗೆ ಏಟು ತಿಂದಾಗ ಕನ್ಕುಶನ್ ಅಗತ್ಯವಾದಾಗ ಇನ್ನೋರ್ವ ಆಟಗಾರನಿಗೆ ಬದಲಿಯಾಗಿ ಸೇರಿಕೊಳ್ಳುವ ಅವಕಾಶ ನೀಡಲಾಗಿತ್ತು. ರವೀಂದ್ರ ಜಡೇಜಾ ತಲೆಗೆ ಏಟು ತಿನ್ನುವ ಮೊದಲೇ ಮಂಡಿರಜ್ಜು ನೋವಿಗೆ ಒಳಗಾಗಿದ್ದರು ಎಂದು ತಿಳಿದಿದೆ. ಆದರೆ ಆಗ ಅವರು ಬದಲಿ ಆಟಗಾರನನ್ನು ಪಡೆದಿರಲಿಲ್ಲ ಎಂದು ಕುಂಬ್ಳೆ ಹೇಳಿದ್ದಾರೆ.
ಮೈದಾನದಲ್ಲೇ ಕನ್ಕಶನ್ ಪರೀಕ್ಷೆ ನಡೆಸಬೇಕೆಂದಿಲ್ಲ
ತಲೆಗೆ ಏಟಿಗೆ ಒಳಗಾದಾಗ ಫಿಸಿಯೋ ಕರೆಯುವುದು ಜಡೇಜಾ ಅವರ ಕರೆಯೆಂದು ನಾನು ಭಾವಿಸುವುದಿಲ್ಲ. ಅದು ಅಂಪೈರ್ ಕರೆಯಾಗಿತ್ತು. ಆದರೆ ಅದು ಆಗಲಿಲ್ಲ. ಕಾರಣ ಜಡೇಜಾ ಒಂಟಿ ರನ್ ತೆಗೆಯಲು ಓಡಿದರು ಮತ್ತು ತಮ್ಮ ಆಟವನ್ನು ಮುಂದುವರಿಸಿದ್ದರು. ಆದರೆ ಕನ್ಕುಶನ್ ಮೈದಾನದಲ್ಲಿ ತಕ್ಷಣವೇ ನಡೆಸಬೇಕೆಂದಿಲ್ಲ. ಡ್ರೆಸ್ಸಿಂಗ್ ರೂಮ್ಗೆ ವಾಪಾಸಾದ ಬಳಿಕ ತಲೆ ನೋವಿ ಅಥವಾ ಕಣ್ಣುಮಂಜಾಗುವ ಅನುಭವವಾಗುತ್ತಿದ್ದರೆ ನಡೆಸಬಹುದು. ಬಹುಶಃ ಈ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ" ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಚಾಹಲ್ ಕಣಕ್ಕಿಳಿದಿದ್ದು ಸರಿಯಾಗಿದೆ
ಆದರೆ ಜಡೇಜಾ ಬ್ಯಾಟಿಂಗ್ನಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದರು. ಆಗ ನೀವು ಅವರ ಇನ್ನೊಂದು ಕೌಶಲ್ಯವನ್ನು ಗಮನಿಸಬೇಕು. ಆತನೋರ್ವ ಸ್ಪಿನ್ನರ್. ಹಾಗಾಗಿ ಆತನ ಸ್ಥಾನಕ್ಕೆ ಇನ್ನೋರ್ವ ಸ್ಪಿನ್ನರ್ನನ್ನು ಸೇರಿಸಿಕೊಳ್ಳಲಾಯಿತು ಎಂದು ಕುಂಬ್ಳೆ ವಿವರಿಸಿದ್ದಾರೆ.