ನವದೆಹಲಿ, ಆಗಸ್ಟ್ 21: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರಿಗೆ ಆಟಗಾರರನ್ನು ಹುರಿದುಂಬಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ ಸಾಮರ್ಥ್ಯವಿದೆ. ಹೀಗಾಗಿ ಭಾರತದ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕುಂಬ್ಳೆ ಮಾದರಿ ಅಭ್ಯರ್ಥಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಮಗುವಿನ ನಿರೀಕ್ಷೆಯಲ್ಲಿದ್ದಾರೆ ನ್ಯೂಜಿಲೆಂಡ್ನ ಸಲಿಂಗಿ ಮಹಿಳಾ ಕ್ರಿಕೆಟರ್ಸ್!
ಬಿಸಿಸಿಐಯು ಆಯ್ಕೆ ಸಮಿತಿಯಲ್ಲಿರುವವರ ಸಂಭಾವನೆ ಹೆಚ್ಚಿಸುವ ಅಗತ್ಯವಿದೆ ಎಂದೂ ಸೆಹ್ವಾಗ್ ತಿಳಿಸಿದ್ದಾರೆ. ಸದ್ಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಎಂಎಎಸ್ಕೆ ಪ್ರಸಾದ್ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಕೇವಲ 13 ಟೆಸ್ಟ್ ಪಂದ್ಯಗಳನ್ನಾಡಿರುವ ಪ್ರಸಾದ್ಗೆ ಅಧ್ಯಕ್ಷ ಸ್ಥಾನ ಲಭಿಸಿರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ.
ಭಾರತ vs ವೆಸ್ಟ್ ಇಂಡೀಸ್: ಪ್ರಥಮ ಟೆಸ್ಟ್ಗೆ ಟೀಮ್ ಇಂಡಿಯಾದ ಸಂಭಾವ್ಯ XI
'ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಕುಂಬ್ಳೆ ಸರಿಯಾದ ಅಭ್ಯರ್ಥಿ. ಕುಂಬ್ಳೆ ಆಟಗಾರನಾಗಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತ ಆಟಗಾರರೊಂದಿಗೆ ಮತ್ತು ಕೋಚ್ ಆಗಿ ಯುವ ಆಟಗಾರರೊಂದಿಗೆ ಉತ್ತಮ ಸಂವಹನ ಹೊಂದಿದ್ದರು,' ಎಂದು ಸೆಹ್ವಾಗ್ ನುಡಿಸಿದ್ದಾರೆ.
ದುಬೈನಲ್ಲಿ ಭಾರತೀಯ ವಧುವನ್ನು ವರಿಸಿದ ಪಾಕ್ ಕ್ರಿಕೆಟರ್ ಹಸನ್ ಅಲಿ
ಮಾತು ಮುಂದುವರೆಸಿದ ಸೆಹ್ವಾಗ್, 'ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರ ಸಂಭಾವನೆ ಏರಿಸಬೇಕು. ಆಗ ಬಹಳಷ್ಟು ಆಟಗಾರರು ಆ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಆಸಕ್ತಿ ತೋರುತ್ತಾರೆ,' ಎಂದರು. ಸದ್ಯ ಆಯ್ಕೆ ಸಮಿತಿಯ ಅಧ್ಯಕ್ಷನಿಗೆ ವಾರ್ಷಿಕ 1 ಕೋ.ರೂ. ನೀಡಲಾಗುತ್ತಿದೆ. ಹೀಗಾಗಿ ಕುಂಬ್ಳೆಯಂತ ಸಮರ್ಥ ಮಾಜಿ ಕ್ರಿಕೆಟಿಗರು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದತ್ತ ಆಸಕ್ತಿ ತೋರುತ್ತಿಲ್ಲ ಎಂಬ ಕಳಕಳಿ ಸೆಹ್ವಾಗ್ ಮಾತಿನಲ್ಲಿತ್ತು.