ಐಸೋಲೇಶನ್ನಲ್ಲಿ ಲಂಕಾ ತಂಡ
ಈ ಬೆಳವಣಿಗೆಯಿಂದಾಗಿ ಶ್ರಿಲಂಕಾ ತಂಡಕ್ಕೂ ಈಗ ಕೊರೊನಾವೈರಸ್ನ ಆತಂಕ ಉಂಟಾಗಿದೆ. ಹೀಗಾಗಿ ಇಂಗ್ಲೆಂಡ್ನಿಂದ ಮಂಗಳವಾರ ಕೊಲಂಬೋಗೆ ಬಂದಿಳಿದ ಶ್ರೀಲಂಕಾ ತಂಡದ ಆಟಗಾರರು ಹೋಟೆಲ್ನಲ್ಲಿ ಐಸೋಲೇಶನ್ಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರನ್ನು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಪರೀಕ್ಷೆಗೆ ಒಳಗಾಗಲಿದ್ದಾರೆ ಲಂಕಾ ಆಟಗಾರರು
ಭಾರತದ ವಿರುದ್ಧ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಶ್ರಿಲಂಕಾ ತಂಡ ಬಯೋಬಬಲ್ಅನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ. ಶ್ರೀಲಂಕಾ ತಂಡದ ಎಲ್ಲಾ ಆಟಗಾರರು ಬುಧವಾರ ಮತ್ತೊಂದು ಸುತ್ತಿನ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದು ಅದರ ಫಲಿತಾಂಶ ಪಡೆದ ನಂತರವೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.
ಲಂಕಾ ತಂಡದ ಬೆಳವಣಿಗೆ ಮೇಲೆ ಬಿಸಿಸಿಐ ಚಿತ್ತ
ಈ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಅಭ್ಯಾಸ ಶ್ರೀಲಂಕಾದಲ್ಲಿ ಮುಂದುವರಿದಿದೆ. ಇಂಗ್ಲೆಂಡ್ ತಂಡದ ಏಳು ಸದಸ್ಯರಲ್ಲಿ ಕೊರೊನಾವೈರಸ್ ಪತ್ತೆಯಾಗಿರುವ ಕಾರಣದಿಂದಾಗಿ ಶ್ರೀಲಂಕಾ ತಂಡದಲ್ಲಿ ನಡೆಯುವ ಬೆಳವಣಿಗೆಯ ಬಗ್ಗೆ ಬಿಸಿಸಿಐ ದೃಷ್ಟಿಯಿಟ್ಟಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅರುಣ್ ಧುಮಲ್ ಮಾತನಾಡಿದ್ದು ತಂಡದ ಮ್ಯಾನೇಜ್ಮೆಂಟ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಜುಲೈ 13ರಿಂದ ಸರಣಿ ಆರಂಭ
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೀಮಿತ ಓವರ್ಗಳಲ್ಲಿ ಮೊದಲಿಗೆ ಏಕದಿನ ಸರಣಿ ನಡೆಯಲಿದೆ. ಜುಲೈ 13ರಂದು ಮೊದಲ ಪಂದ್ಯ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದು ಯುವ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.