ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು
ಮಳೆಯಿಂದ 15 ಓವರ್ ಗೆ ಇಳಿದ ಪಂದ್ಯವನ್ನು ಭಾರತ ಅನಾಯಾಸವಾಗಿ ಚೇಸ್ ಮಾಡಿತು. ನಾಯಕ ಎಂಎಸ್ ಧೋನಿ ಕೊನೆಯಲ್ಲಿ ಆರ್ಭಟಿಸಿದ ಬಗೆ ಬಾಂಗ್ಲಾದೇಶಿಗರನ್ನು ಬೆಚ್ಚಿ ಬೀಳಿಸಿತು. ಕೇವಲ ಆರು ಚೆಂಡುಗಳಲ್ಲಿ 20 ರನ್ ಗಳಿಸಿದ ಮಹೇಂದ್ರ ಸಿಂಗ್ ಧೋನಿ ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು.
|
ಬಾಂಗ್ಲಾದೇಶದ ಬೌಲರ್ ಗಳ ದುಃಸ್ಥಿತಿ
ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಆರ್ಭಟಕ್ಕೆ ಬಾಂಗ್ಲಾದೇಶದ ಬೌಲರ್ ಗಳ ದುಃಸ್ಥಿತಿ.
|
ನಿರೀಕ್ಷೆ ಹಾಗೂ ರಿಯಾಲಿಟಿ ಏನು
ನಿರೀಕ್ಷೆ ಹಾಗೂ ರಿಯಾಲಿಟಿ ಏನು ಎಂಬುದು ತಿಳಿಯಿರಿ.ಧೋನಿ ರುಂಡವನ್ನು ಕೈಯಲ್ಲಿ ಹಿಡಿದ ತಸ್ಕಿನ್ ಅವರ ಚಿತ್ರ ಅದು ಬರೀ ನಿರೀಕ್ಷೆ. ನಿಜವಾಗಿ ಅವರ ಕೈಯಲ್ಲಿ ಹಿಡಿದಿದ್ದು ಮೀನು ಎಂದು ಪತ್ರಕರ್ತೆ ನೈಲಾ ಟ್ವೀಟ್ ಮಾಡಿದ್ದರು.
|
ಜಡೇಜ ಅವರ ಪರೋಡಿ ಅಕೌಂಟ್
ಜಡೇಜ ಅವರ ಪರೋಡಿ ಅಕೌಂಟ್ ಸರ್ ರವೀಂದ್ರ ಜಡೇಜ ಅವರು ಟ್ವೀಟ್ ಮಾಡಿ ಧೋನಿ ಅವ್ರ ಕೈಯಲ್ಲಿ ತಸ್ಕಿನ್ ರುಂಡ ಇರುವ ಚಿತ್ರವನ್ನು ಹಾಕಲಾಗಿತ್ತು.
|
ಪಂದ್ಯದ ನಂತರ ಏನಾಯಿತು ಗೊತ್ತಲ್ಲ
ಫೈನಲ್ ಪಂದ್ಯಕ್ಕೂ ಮುನ್ನ ಹಾಗೂ ಫೈನಲ್ ಪಂದ್ಯಕ್ಕೂ ನಂತರ ಏನಾಯಿತು ಎಂಬುದನ್ನು ನೋಡಿ ಎಂದು ಚಿತ್ರ ಹಾಕಲಾಗಿದೆ.