1. ಮೊಹಮ್ಮದ್ ಶಮಿ
ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಇಲ್ಲದಿರುವುದು ಆಶ್ಚರ್ಯಕರ ಸಂಗತಿ ಎಂದೇ ಹೇಳಬಹುದು. ಒಂದೆಡೆ ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿರುವಾಗ ಬಿಸಿಸಿಐ ಅನುಭವಿ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕಿತ್ತು. ಇನ್ನು ಈಗ ಆಯ್ಕೆಯಾಗಿರುವ ಯುವ ವೇಗಿಗಳಾದ ಅರ್ಷ್ದೀಪ್ ಸಿಂಗ್ ಮತ್ತು ಅವೇಶ್ ಖಾನ್ ಹೆಚ್ಚೇನು ಅನುಭವವನ್ನು ಹೊಂದಿಲ್ಲದಿರುವುದರಿಂದ ತಂಡಕ್ಕೆ ಶಮಿ ಅವಶ್ಯಕತೆ ಇತ್ತು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ದ ಮೊಹಮ್ಮದ್ ಶಮಿ 16 ಎಸೆತಗಳಲ್ಲಿ 20 ವಿಕೆಟ್ ಪಡೆದು ಟಿ ಟ್ವೆಂಟಿಯಲ್ಲಿ ತಾನು ಇನ್ನೂ ಸಹ ಉತ್ತಮ ಆಟಗಾರ ಎಂಬುದನ್ನು ನಿರೂಪಿಸಿದ್ದರು.
2. ಶಿಖರ್ ಧವನ್
ಟೀಮ್ ಇಂಡಿಯಾ ಪರ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಶಿಖರ್ ಧವನ್ ಕೂಡ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅರ್ಹ ಆಟಗಾರ. ಒಟ್ಟಾರೆ ಎಲ್ಲಾ ಮಾದರಿಯ ಟಿ ಟ್ವೆಂಟಿ ಕ್ರಿಕೆಟ್ ಸೇರಿ 317 ಟಿ ಟ್ವೆಂಟಿ ಪಂದ್ಯಗಳನ್ನಾಡಿ 9000ಕ್ಕೂ ಹೆಚ್ಚು ರನ್ ಕಲೆಹಾಕಿರುವ ಶಿಖರ್ ಧವನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 460 ರನ್ ಕಲೆಹಾಕಿದ್ದರು. ಹೀಗೆ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಉತ್ತಮವಾಗಿರುವ ಶಿಖರ್ ಧವನ್ ಅವರಿಗೆ ತಂಡದಲ್ಲಿ ಸ್ಥಾನ ಸಿಗಬೇಕಿತ್ತು.
3. ಇಶಾನ್ ಕಿಶನ್
ಈಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಂತರ ಸಾಕಷ್ಟು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಇಶಾನ್ ಕಿಶನ್ ಅವರನ್ನು ಏಷ್ಯಾಕಪ್ಗೆ ಆಯ್ಕೆ ಮಾಡದೇ ಇರುವುದು ದೊಡ್ಡ ಆಶ್ಚರ್ಯವೇ ಸರಿ. ಈ ವರ್ಷ ಒಟ್ಟು 14 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 430 ರನ್ ಕಲೆಹಾಕಿರುವ ಇಶಾನ್ ಕಿಶನ್ ಈ ವರ್ಷ ಟೀಮ್ ಇಂಡಿಯಾ ಪರ ಅತಿಹೆಚ್ಚು ಟಿ ಟ್ವೆಂಟಿ ರನ್ ಬಾರಿಸಿದ ಎರಡನೇ ಆಟಗಾರ ಹಾಗೂ ಈ ವರ್ಷದ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳ ಪವರ್ಪ್ಲೇನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿದ್ದರೂ ಸಹ ಇಶಾನ್ ಕಿಶನ್ಗೆ ಅವಕಾಶ ಸಿಗದೇ ಇರುವುದು ವಿಷಾದನೀಯವೇ ಸರಿ.
4. ಸಂಜು ಸ್ಯಾಮ್ಸನ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 138 ಪಂದ್ಯಗಳನ್ನಾಡಿ 3500ಕ್ಕೂ ಹೆಚ್ಚು ರನ್ ಗಳಿಸಿ ಚುಟುಕು ಕ್ರಿಕೆಟ್ನಲ್ಲಿ ಅಪಾಯಕಾರಿ ಆಟಗಾರ ಎನಿಸಿಕೊಂಡಿರುವ ಸಂಜು ಸ್ಯಾಮ್ಸನ್ ಇಲ್ಲಿಯವರೆಗೂ 4 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಹಾಗೂ 16 ಟಿ ಟ್ವೆಂಟಿ ಪಂದ್ಯಗಳನ್ನು ಮಾತ್ರ ಆಡಿದ್ದು ಬಿಟ್ಟರೆ ಬಿಸಿಸಿಐ ಸ್ಯಾಮ್ಸನ್ಗೆ ಹೆಚ್ಚಿನ ಅವಕಾಶ ನೀಡಿಲ್ಲ. ಯುಎಇ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದ ಬಿಸಿಸಿಐ ಎಡವಿದೆ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿವೆ.