ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಇಶಾನ್ ಕಿಶನ್
ಎಡಗೈ ಬ್ಯಾಟರ್ ಇಶಾನ್ ಕಿಶನ್ ವಿಶ್ವ ಕ್ರಿಕೆಟ್ನಲ್ಲಿ ನಡೆಯುವ ಅತ್ಯಂತ ಕ್ರಿಯಾತ್ಮಕ ಬ್ಯಾಟರ್ಗಳಲ್ಲಿ ಒಬ್ಬರು ಮತ್ತು ಅವರು ಎದುರಾಳಿಯ ಬೌಲಿಂಗ್ ಪಡೆಯನ್ನು ಬೆಂಡೆತ್ತುವ ಸಾಮರ್ಥ್ಯ ಅವರಲ್ಲಿದೆ. ಆದಾಗ್ಯೂ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಇಶಾನ್ ಕಿಶನ್ ಭಾರತದ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಟೀಂ ಇಂಡಿಯಾ ಪೂರ್ಣ ಸಾಮರ್ಥ್ಯದ ತಂಡವನ್ನು ಹೆಸರಿಸಿದ್ದು, ಗಾಯದ ಕಾರಣದಿಂದ ಹೊರಗುಳಿದಿದ್ದ ನಂತರ ಕೆಎಲ್ ರಾಹುಲ್ ಉಪನಾಯಕನಾಗಿ ತಂಡಕ್ಕೆ ಮರಳಿರುವುದು ತಂಡಕ್ಕೆ ಮತ್ತಷ್ಟು ಬಲ ತಂದುಕೊಡಲಿದೆ. ಆದರೆ ಏಷ್ಯಾಕಪ್ನಿಂದ ಹೊರಗುಳಿದಿರುವ ಇಶಾನ್ ಕಿಶನ್ಗೆ ಖಂಡಿತ ನಿರಾಶೆಯಾಗಿದೆ ಎಂದು ನ್ಯೂಜಿಲೆಂಡ್ನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ.
ಫಾರ್ಮ್ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿರುವುದು ನಿರಾಶೆ
"ಕೆಎಲ್ ರಾಹುಲ್ ಬಹುಶಃ ನಾವು ಚರ್ಚಿಸಿದ ಎಲ್ಲಾ ಸಂಭವನೀಯ ಪಂದ್ಯಗಳಲ್ಲಿ ಸರಳ ನಿರ್ಧಾರವಾಗಿತ್ತು, ಇದು ಸುಲಭವಾದದ್ದು ಎಂದು ನಾನು ಭಾವಿಸುತ್ತೇನೆ. ಭಾರತೀಯ ತಂಡಕ್ಕೆ ಮರಳಿದ ಕೆಎಲ್ ರಾಹುಲ್ಗೆ ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರು ಎಷ್ಟು ಮೌಲ್ಯಯುತವಾಗಿ ಉಪನಾಯಕತ್ವ ನೀಡಿದೆ. ಅಗ್ರ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಬಲಪಡಿಸಲು ರಾಹುಲ್ ಅಗತ್ಯ. ಆದರೆ ಕಳೆದ ಕೆಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಪಂದ್ಯವಾಡದಿರುವುದು ಚಿಂತೆಗೆ ಕಾರಣವಾಗಿದೆ ಮತ್ತು ಫಾರ್ಮ್ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿರುವುದು ಅವರು ನಿರಾಶೆಗೊಳ್ಳುವಂತೆ ಮಾಡಿದೆ," ಎಂದು ಸ್ಪೋರ್ಟ್ಸ್ 18ನ ದೈನಂದಿನ ಕ್ರೀಡಾ ಸುದ್ದಿ ಶೋ 'ಸ್ಪೋರ್ಟ್ಸ್ ಓವರ್ ದಿ ಟಾಪ್'ನಲ್ಲಿ ಸ್ಕಾಟ್ ಸ್ಟೈರಿಸ್ ಹೇಳಿದರು.
ಸ್ವಾಭಾವಿಕವಾಗಿ ಇಶಾನ್ ಕಿಶನ್ ಅದ್ಭುತ ಆಟಗಾರ
"ಕ್ಲಾಸ್ ಆಟಗಾರ ಕೆಎಲ್ ರಾಹುಲ್ ಭಾರತೀಯ ತಂಡದಲ್ಲಿ ಯಾವಾಗಲೂ ಮುಂಚೂಣಿಯ ಆಟಗಾರರಾಗಿದ್ದಾರೆ ಮತ್ತು ಇಶಾನ್ ಕಿಶನ್ಗೆ ಇದು ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ. ರಿಷಭ್ ಪಂತ್ ಅವರಂತಹ ಆಟಗಾರನನ್ನು ಪಡೆಯುವವರೆಗೂ ಭಾರತ ತಂಡ ಬಲಗೈ ಪ್ರಾಬಲ್ಯದ ತಂಡವಾಗಿತ್ತು. ಹಾಗಾಗಿ, ಇಶಾನ್ ಕಿಶನ್ ನಿರಾಶೆಗೊಳ್ಳುತ್ತಾರೆ ಮತ್ತು ಸ್ವಾಭಾವಿಕವಾಗಿ ಅವರು ಅದ್ಭುತ ಆಟಗಾರ ಎಂದು ನಾನು ಭಾವಿಸುತ್ತೇನೆ. ಆದರೆ ಕೆಎಲ್ ರಾಹುಲ್ ಹಿಂತಿರುಗಿರುವುದು ಭಾರತಕ್ಕೆ ಅದ್ಭುತವಾಗಿದೆ. ಏಕೆಂದರೆ ಅವರು ದೊಡ್ಡ ವೇದಿಕೆಯಲ್ಲೂ ನಿಜವಾದ ಮ್ಯಾಚ್ ವಿನ್ನರ್," ನ್ಯೂಜಿಲೆಂಡ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ತಿಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು, ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆಡಿದ್ದರು. ಈ ಸಂದರ್ಭದಲ್ಲಿ ಕೇವಲ 11 ರನ್ ಗಳಿಸಿದರು. ಇಲ್ಲಿಯವರೆಗೆ ಎಡಗೈ ಬ್ಯಾಟರ್ ಇಶಾನ್ ಕಿಶನ್ 19 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 30.16ರ ಸರಾಸರಿಯಲ್ಲಿ 543 ರನ್ ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ 89 ಆಗಿದೆ.
ಏಷ್ಯಾಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ , ರವಿಂಚದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.