ತನ್ನ ಬೆಳವಣಿಗೆಯಲ್ಲಿ ಧೋನಿಯ ಪಾತ್ರ ದೊಡ್ಡದು
"ಜೀವನ ಹಾಗೂ ಕ್ರಿಕೆಟ್ನಲ್ಲಿ ಹೊಸ ಹೊಸ ಸಂಗತಿಗಳನ್ನು ಕಲಿತುಕೊಳ್ಳುವ ಪ್ರಯತ್ನದಲ್ಲಿ ನಾನಿನ್ನೂ ಚಿಕ್ಕವನು. ನನ್ನ ಬೆಳವಣಿಗೆಯಲ್ಲಿ ಎಂಎಸ್ ಧೋನಿ ಅತ್ಯಂತ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ನನಗೆ ಯಾವಾಗೆಲ್ಲಾ ಅವಕಾಶಗಳು ದೊರೆತಿದೆಯೋ ಆಗ ನಾನು ಅವರಿಂದ ಏನೆಲ್ಲಾ ಸಾಧ್ಯವೋ ಅದನ್ನು ಕಲಿಯುವ ಪ್ರಯತ್ನ ಮಾಡಿದ್ದೇನೆ. ಅವರಲ್ಲಿ ಬಹಳ ದೊಡ್ಡದಾದ ಜ್ಞಾನವಿದ್ದು ಅದನ್ನು ಕೇವಲ ಗ್ರಹಿಸಿಕೊಳ್ಳಬೇಕಷ್ಟೆ. ಅದು ನನ್ನ ವ್ಯಕ್ತಿತ್ವದಲ್ಲಿ ಹಾಗೂ ಅಂಗಳದಲ್ಲಿ ವ್ಯಕ್ತವಾಗಿದೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ವೈಫಲ್ಯಗಳಿಂದ ಪಾಠ ಕಲಿಯಬೇಕು
"ಇದು ತನ್ನ ತಪ್ಪುಗಳನ್ನು ಅರಿತುಕೊಳ್ಳುವುದು, ಅವಕಾಶಗಳನ್ನು ಗಳಿಸುವುದು, ವೈಫಲ್ಯಗಳಿಂದ ಪಾಠವನ್ನು ಕಲಿಯುವುದಾಗಿದೆ. ಕೆಲವೊಮ್ಮೆ ನಮಗೆ ವೈಫಲ್ಯಗಳೇ ಪಾಠ ಕಲಿಸುತ್ತವೆ. ನಮ್ಮ ಹತ್ತಿರದವರಿಂದ, ಆಪ್ರರಿಂದ ಕಲಿಯುವುದು ಸಾಧ್ಯವಾಗದಿರಬಹುದು. ಇಂಥಾ ಸಂದರ್ಭದಲ್ಲಿ ಮಾಹಿ ಭಾಯ್ ನನಗೆ ಸಾಕಷ್ಟು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಕೆಲ ವೈಫಲ್ಯಗಳನ್ನು ನೀವು ಕೇವಲ ಅನುಭವಿಸಬೇಕು ಹಾಗೂ ಅವುಗಳಿಂದ ಪಾಠ ಕಲಿಯಬೇಕು" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ಅಂತಿಮ ಸ್ಪರ್ಶ ನೀಡಿದರೆ ಮಾತ್ರ ಪರಿಪೂರ್ಣ!
ಇನ್ನು ಫಿನಿಷರ್ ಆಗಿ ಯಶಸ್ಸು ಗಳಿಸುವ ಬಗ್ಗೆಯೂ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಆಟದಲ್ಲಿ ಫಿನಿಷರ್ ಆಗಿ ಗೆಲುವಿನ ಸಮೀಪಕ್ಕೆ ಹೋದರೆ ಸಾಕಾಗುವುದಿಲ್ಲ ಪಂದ್ಯವನ್ನು ಗೆಲ್ಲಿಸಿಕೊಡಬೇಕಾಗುತ್ತದೆ. ಅಂತಿಮ ಸ್ಪರ್ಶ ನೀಡದ ಹೊರತು ನಿಮ್ಮ ಕಾರ್ಯ ಸಂಪೂರ್ಣವಾಗುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಟಿ20 ವಿಶ್ವಕಪ್ನ ಬಳಿಕ ಫಿಟ್ನೆಸ್ನ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಅನುಮಾನಗಳು ಮೂಡಿದ್ದವು. ಸುಮಾರು ಐದು ತಿಂಗಳುಗಳ ಕಾಲ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದುಕೊಂಡಿದ್ದರು . ಆದರೆ ಐಪಿಎಲ್ 2022ರಲ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಅವರು ಸಂಪೂರ್ಣ ಫಿಟ್ ಆಗಿದ್ದು ಮಾತ್ರವಲ್ಲದೆ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚುತ್ತಿದ್ದಾರೆ.