ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಾಯಕನಾಗಿದ್ದ ಕೆ.ಎಲ್ ರಾಹುಲ್
ಕೆ.ಎಲ್ ರಾಹುಲ್ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದರ ಪರಿಣಾಮವಾಗಿ ರಾಹುಲ್ ತಂಡವನ್ನ ಮುನ್ನಡೆಸಬೇಕಾಗಿತ್ತು. ಆದ್ರೆ ಸರಣಿ ಪ್ರಾರಂಭಕ್ಕೂ ಒಂದು ದಿನ ಮುಂಚೆ ರಾಹುಲ್ ತೊಡೆಸಂದು ನೋವಿನಿಂದ ಬಳಲಿದ ಪರಿಣಾಮ ಇಡೀ ಟೂರ್ನಿಯಿಂದಲೇ ಹೊರಬಿದ್ದರು. ಉನ್ನತ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದ ರಾಹುಲ್ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.
ಕೆ.ಎಲ್ ರಾಹುಲ್ ದಿಢೀರನೆ ಟೂರ್ನಿಯಿಂದ ಹೊರಬಿದ್ದ ಬಳಿಕ ರಿಷಭ್ ಪಂತ್ರನ್ನು ನಾಯರನ್ನಾಗಿ ಘೋಷಿಸಲಾಯ್ತ. ಮೊದಲೆರಡು ಪಂದ್ಯಗಳನ್ನ ಸೋತಿದ್ದ ಟೀಂ ಇಂಡಿಯಾ ನಂತರದ ಎರಡೂ ಪಂದ್ಯಗಳಲ್ಲಿ ದಾಖಲೆಯ ಜಯಪಡೆದು ಸರಣಿಯನ್ನ ಸಮಬಲಗೊಳಿಸಿತು. ಅಂತಿಮ ಪಂದ್ಯವು ಬೆಂಗಳೂರಿನಲ್ಲಿ ಮಳೆಯಲ್ಲಿಯೇ ಕೊಚ್ಚಿ ಹೋದ ಪರಿಣಾಮ ಸರಣಿ 2-2ರಿಂದ ಸಮಬಲಗೊಂಡಿತು.
ಅತಿಯಾಯ್ತಾ ಟೀಮ್ ಇಂಡಿಯಾದಲ್ಲಿ ಆಟಗಾರರ ಬದಲಾವಣೆ?: ನಾಯಕ ರೋಹಿತ್ ಕೊಟ್ರು ಬಲವಾದ ಸಮರ್ಥನೆ!
ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ಕೆ.ಎಲ್ ರಾಹುಲ್ ಚೇತರಿಕೆಗೂ ಮುನ್ನ ಕೊರೊನಾ
ಜರ್ಮನಿಯಿಂದ ಹೆರಿನಾ ಶಸ್ತ್ರಚಿಕಿತ್ಸೆ ನಂತರ ಭಾರತಕ್ಕೆ ಮರಳಿದ ಬಳಿಕ ರಾಹುಲ್ 6 ರಿಂದ 12 ವಾರಗಳ ಕಾಲ ಪುನರ್ವಸತಿ ಶಿಬಿರದಲ್ಲಿ ಚೇತರಿಕೆ ಪಡೆಯಬೇಕಾಗಿತ್ತು. ಇನ್ನೇನು ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾಗ ಕೋವಿಡ್-19 ಪಾಸಿಟಿವ್ ಆದ ಕಾರಣ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಕಳೆದುಕೊಂಡರು.
ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗದ ರಾಹುಲ್ ಕೊನೆಗೂ ಆಗಸ್ಟ್ 27ರಿಂದ ನಡೆಯಲಿರುವ ಏಷ್ಯಾಕಪ್ನಲ್ಲಿ ಭಾಗಿಯಾಗಲಿದ್ದಾರೆ.
ಕೆ.ಎಲ್ ರಾಹುಲ್ ಆಯ್ಕೆ ಕುರಿತು ಡ್ಯಾನೀಶ್ ಕನೇರಿಯಾ ಅಪಸ್ವರ
ಪಾಕಿಸ್ತಾನ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಪ್ರಕಾರ ಕೆ.ಎಲ್ ರಾಹುಲ್ ಚೇತರಿಕೆಗೆ ಇನ್ನಷ್ಟು ಸಮಯಾವಕಾಶ ನೀಡಬೇಕಾಗಿತ್ತು. ಏಕೆಂದರೆ ಟಿ20 ವಿಶ್ವಕಪ್ ಬಹುಮುಖ್ಯವಾಗಿರುವುದರಿಂದ ಕೆ.ಎಲ್ ರಾಹುಲ್ ಏಷ್ಯಾಕಪ್ಗೆ ಆಯ್ಕೆ ಮಾಡದೇ ಇದ್ದರೂ ಆಗುತ್ತಿತ್ತು ಎಂದಿದ್ದಾರೆ.
"ರಾಹುಲ್ ಸ್ವಲ್ಪ ಸಮಯದವರೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ, ಆದರೂ ನಿರಂತರವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಆಯ್ಕೆ ಮಾಡಲಾಗಿದೆ. ಆಟಗಾರನು ಗಾಯದಿಂದ ಹಿಂತಿರುಗಿದಾಗ, ನೀವು ಅವನನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವಂತೆ ಒತ್ತಡ ಹೇರಬಾರದು. ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ರಾಹುಲ್ ಪ್ರಮುಖ ಆಟಗಾರನಾಗಿರುವುದರಿಂದ ತಂಡಕ್ಕೆ ಅವರಿಗೆ ಸ್ವಲ್ಪ ಸಮಯ ನೀಡಬೇಕಿತ್ತು "ಎಂದು ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
ಮೊಹಮ್ಮದ್ ಶಮಿ ಹೊರಗಿಟ್ಟಿದ್ದಕ್ಕೂ ಕನೇರಿಯಾ ಬೇಸರ
ಕೆ.ಎಲ್ ರಾಹುಲ್ ಆಯ್ಕೆ ಒಂದೆಡೆಯಾದ್ರೆ, ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ತಂಡದಿಂದ ಹೊರಗಿಟ್ಟ ಕುರಿತಾಗಿಯೂ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವೇಶ್ ಖಾನ್ ಬದಲು ಮೊಹಮ್ಮದ್ದ ಶಮಿಯನ್ನ ಏಷ್ಯಾಕಪ್ಗೆ ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.
ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪ್ರಮುಖ ಬೌಲರ್ ಆಗಿರುವುದರಿಂದ ಆಯ್ಕೆಗಾರರು ವರ್ಕ್ ಲೋಡ್ ಮ್ಯಾನೇಜ್ ಮಾಡುವ ಸಲುವಾಗಿ ಶಮಿಯನ್ನು ಆಯ್ಕೆ ಮಾಡಿಲ್ಲ ಎಂಬ ಅಭಿಪ್ರಾಯಗಳು ಸಹ ಕೇಳಿಬಂದಿವೆ.