"ನಾಲ್ಕನೇ ಕ್ರಮಾಂಕ ಭಾರತಕ್ಕೆ ಸವಾಲಾಗಬಹುದು"
ಇತ್ತೀಚೆಗೆ ರಿಷಭ್ ಪಂತ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಂತ್ ಶರಂಭಿಕನಾಗಿಯೂ ಕಣಕ್ಕಿಳಿದಿದ್ದರು. ಹೋಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರನನ್ನು ಕಣಕ್ಕಿಳಿಲು ಭಾರತ ತಂಡ ಬಯಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. "ಖಂಡಿತವಾಗಿಯೂ ಭಾರತ ತಂಡ ನಾಲ್ಕನೇ ಕ್ರಮಾಂಕದ ಬಗೆಗಿನ ಗೊಂದಲವನ್ನು ಶೀಘ್ರದಲ್ಲಿ ಪರಿಹರಿಸಿಕೊಳ್ಳಬೇಕಿದೆ. ಈ ಕ್ರಮಾಂಕವನ್ನು ಓರ್ವ ನಿಗದಿತ ಆಟಗಾರನಿಗೆ ನೀಡಬೇಕಿದೆ" ಎಂದಿದ್ದಾರೆ ಸಬಾ ಕರೀಮ್.
4ನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಬೆಸ್ಟ್ ಎಂದ ಸಬಾ
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಟಿ20 ತಂಡದ ನಾಲ್ಕನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಯ್ಕೆ ಎಂದಿದ್ದಾರೆ ಸಬಾ ಕರೀಮ್. ಇನ್ನು ಮ್ಯಾನೇಜ್ಮೆಂಟ್ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರನ್ನು ಈ ಕ್ರಮಂಕಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಈ ಇಬ್ಬರನ್ನು ಆಯ್ಕೆ ಮಾಡದಿದ್ದಲ್ಲಿ ಸೂರ್ಯಕುಮಾರ್ ಯಾದವ್ ಸೂಕ್ತ ಆಟಗಾರನಾಗುತ್ತಾರೆ. ಅದು ಅವರ ಅತ್ಯುತ್ತಮ ಕ್ರಮಾಂಕವಾಗಿದೆ ಎಂದಿದ್ದಾರೆ ಸಬಾ ಕರೀಮ್.
ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ: ರೇಗಿಸ್ ಚಕಬ್ವಾ ನಾಯಕ
ಕೊಹ್ಲಿ, ಕೆಎಲ್ ರಾಹುಲ್ ಕಮ್ಬ್ಯಾಕ್
ಏಷ್ಯಾ ಕಪ್ನ ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕಮ್ಬ್ಯಾಕ್ ಮಾಡಿದ್ದಾರೆ. ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದು ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಅನುಭವಿ ದಿನೇಶ್ ಕಾರ್ತಿಕ್ಗೆ ಫಿನಿಷರ್ ಆಗಿ ತಂಡದಲ್ಲಿ ಸ್ಥಾನವನ್ನು ನೀಡಲಾಗಿದ್ದು ಏಷ್ಯಾಕಪ್ನಲ್ಲಿಯೂ ಈ ನಿರ್ಧಾರವನ್ನು ಮುಂದುವರಿಸಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಟಿ20 ವಿಶ್ವಕಪ್ 2022: ಇದೇ ನೋಡಿ ಸೆಮಿಫೈನಲ್ ಹಂತಕ್ಕೇರುವ ನಾಲ್ಕು ಸಂಭಾವ್ಯ ತಂಡಗಳು!
5 ಬೌಲರ್ಗಳು ಹಾಗೂ ಹಾರ್ದಿಕ್ ಪಾಂಡ್ಯ
ಇನ್ನು ಭಾರತದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿರುವ ಸಬಾ ಕರೀಮ್ ಟೀಮ್ ಇಂಡಿಯಾ ಐವರು ಬೌಲರ್ಗಳು ಹಾಗೂ ಆರನೇ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅದ್ಭುತವಾಗಿ ಪ್ರದರ್ಶನ ನೀಡುತ್ತಾ ಬಂದಿದೆ. ಈ ಸಂಯೋಜನೆಯನ್ನೇ ಬಳಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಆಡಸಬೇಕೆಂದಿದ್ದರೆ ಈ ಸಂಯೋಜನೆಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನಾಲ್ವರು ಬೌಲರ್ಗಳ ಜೊತೆಗೆ ಹಾರ್ದಿಕ್ ಪಾಂಡ್ಯ ಐದನೇ ಬೌಲರ್ ಆಗಿ ಕಣಕ್ಕಿಳಿಯಬೇಕಾಗುತ್ತದೆ ಎಂದಿದ್ದಾರೆ ಸಾಬಾ ಕರೀಮ್.