ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ನನಗೆ ಇದು ಮತ್ತೊಂದು ಪಂದ್ಯವಷ್ಟೆ; IND vs PAK ಪಂದ್ಯದ ಕುರಿತು ಗಂಗೂಲಿ ಮಾತು

Asia Cup 2022: What Did Sourav Ganguly Say About India vs Pakistan Match?

2022ರ ಏಷ್ಯಾ ಕಪ್ ಯುಎಇಯಲ್ಲಿ ಇದೇ ಆಗಸ್ಟ್ 27ರಿಂದ ಕಿಕ್‌ಸ್ಟಾರ್ಟ್‌ ಪಡೆಯಲಿದ್ದು, ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ದುಬೈನಲ್ಲಿ ಸೆಣಸಾಟ ನಡೆಸಲಿದೆ. ಬದ್ಧ ಎದುರಾಳಿಗಳ ಕಾದಾಟ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಕಾಯುತ್ತಾ ಕುಳಿತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ.

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಯು ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಆರ್ಥಿಕ ಬಿಕ್ಕಟ್ಟಿನಿಂದಾಗಿ ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಸ್ಥಳಾಂತರಗೊಂಡಿದೆ.

ಏಷ್ಯಾ ಕಪ್ 2022: ಭಾರತ ತಂಡವೇ ಚಾಂಪಿಯನ್ ಆಗಲಿದೆ ಎಂದ ಪಾಕ್ ಮಾಜಿ ನಾಯಕಏಷ್ಯಾ ಕಪ್ 2022: ಭಾರತ ತಂಡವೇ ಚಾಂಪಿಯನ್ ಆಗಲಿದೆ ಎಂದ ಪಾಕ್ ಮಾಜಿ ನಾಯಕ

ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಸೆಣಸಾಟದ ಕುತೂಹಲವನ್ನು ಕಡಿಮೆ ಮಾಡಿದ್ದು, ಇದು ಪಂದ್ಯಾವಳಿಯಲ್ಲಿ ಮತ್ತೊಂದು ಪಂದ್ಯವಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

ಯಾವಾಗಲೂ ಪಂದ್ಯಾವಳಿಯನ್ನು ಗೆಲ್ಲಲು ನೋಡುತ್ತಿದ್ದೆ

ಯಾವಾಗಲೂ ಪಂದ್ಯಾವಳಿಯನ್ನು ಗೆಲ್ಲಲು ನೋಡುತ್ತಿದ್ದೆ

ಪ್ರಸ್ತುತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ, ತಮ್ಮ ಆಟದ ದಿನಗಳಲ್ಲಿಯೂ ಪಾಕಿಸ್ತಾನ ವಿರುದ್ಧದ ಆಟವನ್ನು ವಿಶೇಷ ಪಂದ್ಯವಾಗಿ ನೋಡಲಿಲ್ಲ, ಏಕೆಂದರೆ ಯಾವಾಗಲೂ ಪಂದ್ಯಾವಳಿಯನ್ನು ಗೆಲ್ಲುವುದು ಗುರಿಯಾಗಿರುತ್ತದೆ ಎಂದು ತಿಳಿಸಿದರು.

"ನಾನು ಇದನ್ನು ಏಷ್ಯಾ ಕಪ್ ಪಂದ್ಯಾವಳಿ ಎಂದು ನೋಡುತ್ತಿದ್ದೇನೆ. ನಾನು ಯಾವುದೇ ಪಂದ್ಯಾವಳಿಯನ್ನು ಭಾರತ ಮತ್ತು ಪಾಕಿಸ್ತಾನ ಎಂದು ನೋಡುವುದಿಲ್ಲ. ನಾನು ನನ್ನ ಆಟದ ದಿನಗಳಲ್ಲಿದ್ದಾಗಲೂ ಭಾರತ ಮತ್ತು ಪಾಕಿಸ್ತಾನದ ಆಟ ನನಗೆ ಮತ್ತೊಂದು ಪಂದ್ಯದಂತೆ ನೋಡುತ್ತಿದ್ದೆವು. ನಾನು ಯಾವಾಗಲೂ ಪಂದ್ಯಾವಳಿಯನ್ನು ಗೆಲ್ಲಲು ನೋಡುತ್ತಿದ್ದೆ," ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ

ಇತ್ತೀಚಿನ ದಿನಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಬಿಸಿಸಿಐ ಅಧ್ಯಕ್ಷರಿಗೆ ಭಾರತ ತಂಡದ ಮೇಲೆ ಸಾಕಷ್ಟು ನಂಬಿಕೆ ಇದೆ. "ಭಾರತ ಉತ್ತಮ ತಂಡವಾಗಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ, ಅದೇ ರೀತಿ ಏಷ್ಯಾಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ," ಎಂದು ಭಾರತದ ಮಾಜಿ ನಾಯಕ ಸವರವ್ ಗಂಗೂಲಿ ಹೇಳಿದರು.

ಸೆಪ್ಟೆಂಬರ್ 16ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಲೆಜೆಂಡ್ಸ್ ಕ್ರಿಕೆಟ್ ಪಂದ್ಯದಲ್ಲಿ ಸೌರವ್ ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದ ವಿಶ್ವ ಜೈಂಟ್ಸ್ ವಿರುದ್ಧ ಬಿಸಿಸಿಐ ಅಧ್ಯಕ್ಷ ಗಂಗೂಲಿ ಇಂಡಿಯಾ ಮಹಾರಾಜಸ್ ತಂಡದ ನಾಯಕರಾಗಿದ್ದಾರೆ.

ಮೊದಲಿನಂತೆಯೇ ಕವರ್ ಡ್ರೈವ್ ಆಡಬೇಕೆಂದು ನಾನು ಬಯಸುತ್ತೇನೆ

ಮೊದಲಿನಂತೆಯೇ ಕವರ್ ಡ್ರೈವ್ ಆಡಬೇಕೆಂದು ನಾನು ಬಯಸುತ್ತೇನೆ

ಎಡಗೈ ಆಟಗಾರನಿಂದ ಪ್ರೇಕ್ಷಕರು ಸಿಕ್ಸರ್‌ಗಳನ್ನು ನೋಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂದು ಕೇಳಲಾಯಿತು. ಆಗ ಸೌರವ್ ಗಂಗೂಲಿ ನಕ್ಕರು ಮತ್ತು ತಾವು ಬಹಳ ಸಮಯದಿಂದ ಕ್ರಿಕೆಟ್ ಸಂಪರ್ಕದಿಂದ ಹೊರಗುಳಿದಿದ್ದೇನೆ. ಒಂದೇ ಬಾಲ್ ಅನ್ನು ಆಡಲು ಸಾಧ್ಯವಾಗುತ್ತದೆಯೇ ಎಂದು ಸಹ ಖಚಿತವಾಗಿಲ್ಲ ಎಂದು ನಗುತ್ತಲೇ ಉತ್ತರಿಸಿದರು.

"ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ಮೊದಲಿನಂತೆಯೇ ಕವರ್ ಡ್ರೈವ್ ಆಡಬೇಕೆಂದು ನಾನು ಬಯಸುತ್ತೇನೆ. ನಾನು ಬ್ಯಾಟ್ ಮತ್ತು ಬಾಲ್ ಅನ್ನು ಚೆನ್ನಾಗಿ ಮಾಡಬಹುದೆಂದು ನಾನು ಬಯಸುತ್ತೇನೆ. ನಾನು ಒಂದೇ ಆಟವನ್ನು ಆಡುತ್ತೇನೆ ಮತ್ತು ಆಟವನ್ನು ಆನಂದಿಸುತ್ತೇನೆ. ಇದು ಉತ್ತಮ ಆಟವಾಗಿದೆ ಈ ಸಂದರ್ಭದಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ," ಎಂದು ಸೌರವ್ ಗಂಗೂಲಿ ಹೇಳಿದರು.

ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ಪೂರ್ಣ ತಂಡಗಳು

ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ಪೂರ್ಣ ತಂಡಗಳು

ಭಾರತ ಮಹಾರಾಜಸ್: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್. ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಆರ್.ಪಿ. ಸಿಂಗ್, ಜೋಗಿಂದರ್ ಶರ್ಮಾ.

ವಿಶ್ವ ಜೈಂಟ್ಸ್: ಇಯಾನ್ ಮಾರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ವೆಸ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಮಸಕಡ್ಜಾ, ಮಶ್ರಫೆ ಮೊರ್ಟಾಝಾ, ಅಸ್ಗ್ಹರ್‌ಲ್ಫ್‌ಸನ್, ಜಾನ್ ಅಸ್ಗ್ಹರ್ಲ್ಫ್‌ಸನ್ , ಬ್ರೆಟ್ ಲೀ, ಕೆವಿನ್ ಒ'ಬ್ರೇನ್, ದಿನೇಶ್ ರಾಮ್ದಿನ್

Story first published: Monday, August 15, 2022, 21:59 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X