ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ
ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ ನಡೆದ ನಂತರ, ಭಾರತ, ಪಾಕಿಸ್ತಾನದ ಜೊತೆಗಿನ ಕ್ರೀಡಾ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿತ್ತು. ಅದಕ್ಕೆ, ಕ್ರಿಕೆಟ್ ಕೂಡಾ ಹೊರತಾಗಿರಲಿಲ್ಲ. ಆದರೆ, ಈ ಬಾರಿಯ ಏಷ್ಯಾ ಕಪ್ ಆತಿಥ್ಯವನ್ನು ಪಾಕ್ ವಹಿಸಿಕೊಂಡಿತ್ತು. ಅಲ್ಲಿಗೆ, ನಾವು ಹೋಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿತ್ತು.
ತಟಸ್ಥ ಮೈದಾನದಲ್ಲಿ ಪಾಕ್ ಜೊತೆ ಕ್ರಿಕೆಟ್
"ಭಾರತ, ಏಷ್ಯಾ ಕಪ್ ನಲ್ಲಿ ಭಾಗವಹಿಸದೇ ಇದ್ದರೆ, ನಾವೇನೂ ಪ್ರತಿರೋಧ ತೋರದೇ ಇರುವುದಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ಟೂರ್ನಮೆಂಟ್ ಅನ್ನು ನಾವು ಬಹಿಷ್ಕರಿಸುತ್ತೇವೆ" ಎಂದು ಪಿಸಿಬಿ ಸಿಇಒ ವಾಸೀಂ ಖಾನ್ ಎಚ್ಚರಿಕೆಯನ್ನು ನೀಡಿದ್ದರು. ತಟಸ್ಥ ಮೈದಾನದಲ್ಲಿ ಪಾಕ್ ಜೊತೆ ಕ್ರಿಕೆಟ್ ಆಡಲು ನಮ್ಮ ತಕರಾರು ಏನೂ ಇಲ್ಲ ಎಂದು ಬಿಸಿಸಿಐ, ತನ್ನ ನಿಲುವನ್ನು ಸ್ಪಷ್ಟ ಪಡಿಸಿತ್ತು.
ಪಾಕ್ ಬಹಿಷ್ಕಾರದ ಬೆದರಿಕೆ: ಡೋಂಟ್ ಕೇರ್ ಅಂದ ಬಲಾಢ್ಯ ಬಿಸಿಸಿಐ
ದುಬೈ ನಲ್ಲಿ ಟೂರ್ನಮೆಂಟ್
ಭಾರತದ ಈ ನಿಲುವಿನಿಂದಾಗಿ ಏಷ್ಯಾ ಕಪ್ ಆಯೋಜನೆ ಪಾಕ್ ಕೈತಪ್ಪಿದೆ. ಟೀಂ ಇಂಡಿಯಾ ಆಡದೇ ಇದ್ದರೆ, ಟೂರ್ನಮೆಂಟ್ ಗೆ ಮೌಲ್ಯ ಇರುವುದಿಲ್ಲ ಎನ್ನುವುದನ್ನು ಅರಿತಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್, ದುಬೈ ನಲ್ಲಿ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಿದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆ
"ಏಷ್ಯಾಕಪ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಇದರಲ್ಲಿ ಆಡಲಿವೆ" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಮಾರ್ಚ್ ಮೂರರಂದು ನಡೆಯಲಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಗಾಗಿ ದುಬೈಗೆ ತೆರಳುವ ಮುನ್ನ ಗಂಗೂಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಟೂರ್ನಿಗೆ ಈ ಪಾಕಿಸ್ತಾನ ಆತಿಥ್ಯವಹಿಸಿಕೊಂಡಿತ್ತು.