|
ಸರಣಿ ಟ್ವೀಟ್ ಮಾಡಿದ ಹರ್ಭಜನ್
ಕ್ರೀಡಾ ವಿಭಾಗದ ಉನ್ನತ ಪ್ರಶಸ್ತಿಯಾದ ಖೇಲ್ರತ್ನ ಪ್ರಶಸ್ತಯಿಂದ ಕೈ ಬಿಟ್ಟ ಬಗ್ಗೆ ಉಂಟಾದ ಚರ್ಚೆಗೆ ಸ್ವತಃ ಹರ್ಭಜನ್ ಸಿಂಗ್ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಮೊದಲ ಟ್ವೀಟ್ನಲ್ಲಿ" ಖೇಲ್ರತ್ನ ಪ್ರಶಸ್ತಿ ನಾಮ ನಿರ್ದೇಶನದಿಂದ ನನ್ನ ಹೆಸರು ವಾಪಾಸ್ ಪಡೆದ ನಂತರ ಸಾಕಷ್ಟು ಕರೆಗಳು ಹಾಗೂ ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ ನಿಜಾಂಶವೇನೆಂದರೆ ನಾನು ಈ ಪ್ರಶಸ್ತಿಗೆ ಅರ್ಹನಲ್ಲ. ಯಾಕೆಂದರೆ ಈ ಪ್ರಶಸ್ತಿಗೆ ಕಳೆದ ಮೂರು ವರ್ಷಗಳ ಅಂತಾರಾಷ್ಟ್ರೀಯ ಪ್ರದರ್ಶನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
|
ಸರ್ಕಾರದ ತಪ್ಪಿಲ್ಲ
ಪಂಜಾನ್ ಸರ್ಕಾರದ ತಪ್ಪಿಲ್ಲದಂತಿರುವಂತೆಎರಡನೇ ಟ್ವೀಟ್ನಲ್ಲಿ ಪಂಜಾಬ್ ಸರ್ಕಾರದ ತಪ್ಪು ಈ ವಿಚಾರದಲ್ಲಿ ಇಲ್ಲ ಎಂಬುದನ್ನು ಹರ್ಭಜನ್ ಸಿಂಗ್ ವಿವರಿಸಿದ್ದಾರೆ. 'ಈ ವಿಚಾರದಲ್ಲಿ ಪಂಜಾಬ್ ಸರ್ಕಾರ ಸರಿಯಾಗಿರುವುದನ್ನೇ ಮಾಡಿದೆ. ಈ ಬಗ್ಗೆ ಮಾಧ್ಯಮದಲ್ಲಿರುವ ನನ್ನ ಸ್ನೇಹಿತರಲ್ಲಿ ಊಹಿಸದಂತೆ ಮನವಿ ಮಾಡಿಕೊಳ್ಳುತ್ತೇನೆ' ಎಂದು ಭಜ್ಜಿ ಹೇಳಿಕೊಂಡಿದ್ದಾರೆ.
|
ಕಳೆದ ವರ್ಷ ತಡವಾಗಿತ್ತು ನಿಜ ಆದರೆ..
ಈ ವಿಚಾರವಾಗಿ ಮೂರನೇ ಟ್ವೀಟ್ನಲ್ಲಿ ಹರ್ಭಜನ್ ಸಿಂಗ್, "ಖೇಲ್ ರತ್ನಕ್ಕೆ ನಾಮನಿರ್ದೇಶನ ಮಾಡುವ ಬಗ್ಗೆ ಸಾಕಷ್ಟು ಗೊಂದಲ ಮತ್ತು ಊಹಾಪೋಹಗಳು ಹರಿದಾಡುತ್ತಿದೆ ಆದ್ದರಿಂದ ನಾನು ಸ್ಪಷ್ಟಪಡಿಸುತ್ತೇನೆ. ಹೌದು, ಕಳೆದ ವರ್ಷ ನಾಮನಿರ್ದೇಶನವನ್ನು ತಡವಾಗಿ ಕಳುಹಿಸಲಾಗಿತ್ತು. ಆದರೆ ಈ ವರ್ಷ ನಾನು ಪಂಜಾಬ್ ಸರ್ಕಾರವನ್ನು ನನ್ನ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡೆ. ಏಕೆಂದರೆ ನಾನು 3 ವರ್ಷದ ಅರ್ಹತಾ ಮಾನದಂಡಗಳಿಗೆ ಒಳಪಡುವುದಿಲ್ಲ. ಮತ್ತಷ್ಟು ಊಹೆಗಳನ್ನು ಮಾಡಿಕೊಳ್ಳಬೇಡಿ ಎಂದು ಹರ್ಬಜನ್ ಸಿಂಗ್ ಹೇಳಿದ್ದಾರೆ.
ಕಳೆದ ವರ್ಷ ತಿರಸ್ಕೃತವಾಗಿತ್ತು ಭಜ್ಜಿ ನಾಮ ನಿರ್ದೇಶನ
ಕಳೆದ ವರ್ಷದ ಪ್ರಶಸ್ತಿಗೆ ಹರ್ಭಜನ್ ಸಿಂಗ್ ಅವರ ದಾಖಲೆಪತ್ರಗಳನ್ನು ಪಂಜಾಬ್ ಸರ್ಕಾರ ಕ್ರೀಡಾ ಸಚಿವಾಲಯಲಕ್ಕೆ ನಿಗದಿತ ದಿನಾಂಕದ ನಂತರ ತಡವಾಗಿ ಕಳುಹಿಸಿತ್ತು. ಹೀಗಾಗಿ ಅಂದು ಹರ್ಭಜನ್ ಸಿಂಗ್ ನಾಮ ನಿರ್ದೇಶನವನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ಪ್ರಶಸ್ತಿಗೆ ಹರ್ಭಜನ್ ಸಿಂಗ್ ಹೆಸರನ್ನು ಸರಿಯಾದ ಸಮಯಕ್ಕೇ ಕಳುಹಿಸಿತ್ತು. ಆದರೆ ಯಾವುದೇ ವಿವರಣೆಗಳನ್ನು ನೀಡದೆ ಅದನ್ನು ವಾಪಾಸ್ ಪಡೆದುಕೊಂಡಿತ್ತು. ಹೀಗಾಗಿ ಚರ್ಚೆಗೆ ಕಾರಣವಾಗಿತ್ತು.