ಒತ್ತಡದ ನಡುವೆಯೂ ಉತ್ತಮ ಆಟ
ರಾಜ್ ಕೋಟ್ ನಲ್ಲಿನ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲಿ 154 ಎಸೆತಗಳಿಗೆ 134 ರನ್ ಬಾರಿಸಿದ್ದ ಪೃಥ್ವಿ, ಹೈದರಾಬಾದ್ ನಲ್ಲಿನ ದ್ವಿತೀಯ ಟೆಸ್ಟ್ ನಲ್ಲಿ ತನ್ನ ಮೇಲೆ ನಿರೀಕ್ಷೆಯ ಒತ್ತಡವಿದ್ದ ಹೊರತಾಗಿಯೂ 70 ರನ್ ಗಳಿಸಿದ್ದರು.
ಅಜಾಗರೂಕನಲ್ಲ
ಹೈದರಾಬಾದ್ ಟೆಸ್ಟ್ ಬಳಿಕ ಪೃಥ್ವಿಯ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, 'ತನಗೆ ಲಭಿಸಿದ ಅವಕಾಶವನ್ನು ಪೃಥ್ವಿ ಬಹಳ ಸೊಗಸಾಗಿ ಬಳಸಿಕೊಂಡರು. ಪೃಥ್ವಿ ಒಬ್ಬ ನಿರ್ಭೀತ ಆಟಗಾರ. ಆದರೆ ಆತ ಅಜಾಗರೂಕನಲ್ಲ' ಎಂದರು. (ಚಿತ್ರ ಕೃಪೆ: ಎಎನ್ಐ)
ಭರ್ಜರಿ 10 ವಿಕೆಟ್ ಜಯ
ಹೈದರಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ vs ಭಾರತ ದ್ವಿತೀಯ ಟೆಸ್ಟ್ ನಲ್ಲಿ ವಿಂಡೀಸ್ ಕೊಂಚ ಉತ್ತಮ ಆಟ ಪ್ರದರ್ಶಿಸಿತಾದರೂ ಭಾರತ 10 ವಿಕೆಟ್ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ 2-0ಯಿಂದ ಸರಣಿ ಜಯಿಸಿತ್ತು. ಮೊದಲ ಟೆಸ್ಟ್ ನಲ್ಲೂ ಭಾರತ 272 ರನ್ ಭರ್ಜರಿ ಜಯ ಗಳಿಸಿತ್ತು.(ಚಿತ್ರದಲ್ಲಿ ಸರಣಿ ಶ್ರೇಷ್ಠ ಪೃಥ್ವಿ)
ಇಂಗ್ಲೆಂಡ್ ನಲ್ಲೇ ಗಮನಿಸಿದ್ದೆವು
'ಪೃಥ್ವಿ ಶಾ ತನ್ನ ಆಟದ ಬಗ್ಗೆ ಅಷ್ಟೇ ಭರವಸೆ ಉಳ್ಳವರು. ನಾವಿದನ್ನು ಇಂಗ್ಲೆಂಡ್ ನಲ್ಲೇ ಗಮನಿಸಿದ್ದೆವು. ಇಂಗ್ಲೆಂಡ್ ನಲ್ಲಿ ಪೃಥ್ವಿ ನೆಟ್ ಅಭ್ಯಾಸ ನಡೆಸುತ್ತಿದ್ದಾಗ ಅವರ ದಿಟ್ಟ ಆಟದ ಬಗ್ಗೆ ನಮಗೆ ನಂಬಿಕೆ ಮೂಡಿತ್ತು' ಎಂದು ಕೊಹ್ಲಿ ತಿಳಿಸಿದರು.
ಆಸೀಸ್ ಸೀರೀಸ್ ಗೂ ವಿಶ್ವಾಸ ಮತ
'ಪೃಥ್ವಿಯ ಆಟ ನಮ್ಮೆಲ್ಲರ ನಂಬಿಕೆ ಗಳಿಸಿದೆ. ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆಗೆ ಸಂಬಂಧಿಸಿ ತಂಡದ ನಾಯಕನ ಮತವನ್ನಂತೂ ಪೃಥ್ವಿ ಖಂಡಿತಾ ಪಡೆಯಲಿದ್ದಾರೆ' ಎಂದು ಕೊಹ್ಲಿ ಹೇಳಿದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಡಿಸೆಂಬರ್ 6ರಿಂದ ಆರಂಭಗೊಳ್ಳಲಿದೆ.