ಕಲ್ಲಿದ್ದಲು ಗಣಿ ವಿರುದ್ಧ ಪ್ರತಿಭಟನೆ
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸುವ ಯೋಜನೆಯ ವಿರುದ್ಧ ಹೀಗೆ ಪ್ರತಿಭಟಿಸಲಾಗಿದೆ. ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವಿಳಂಬ ಮಾಡುವಂತೆ ಅಥವಾ ಅಡ್ಡಿಪಡಿಸುವಂತೆ ಜರ್ಮನಿಯ ಪ್ರಮುಖ ಇಂಜಿನಿಯರಿಂಗ್ ಕಂಪನಿಯಾದ ಸಿಮನ್ಸ್ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ.
ಏಕದಿನ ಪಂದ್ಯಕ್ಕೆ ಅಡ್ಡಿ
ಪಂದ್ಯ ನಡೆಯುತ್ತಿದ್ದಾಗಲೇ ಪ್ರತಿಭಟನಾಕಾರರು ಮೈದಾನಕ್ಕೆ ಪ್ರವೇಶಿಸಿ ಅಡ್ಡಿಪಡಿಸಿದರು. ಮೈದಾನಕ್ಕೆ ನುಗ್ಗಿದ ಪ್ರಕರಣಗಳಲ್ಲಿ ಈ ಘಟನೆ ವಿಭಿನ್ನವೆಂಬಂತೆ ದಾಖಲಾಗಿದೆ. ಭದ್ರತಾ ಸಿಬ್ಬಂದಿಗಳು ಮೈದಾನಕ್ಕೆ ಬಂದು ಪ್ರತಿಭಟನಾಕಾರರನ್ನು ಹೊರ ತೆಗೆದುಕೊಂಡು ಹೋಗಲು 30-35 ಸೆಕೆಂಡ್ಗಳು ಹಿಡಿದವು.
ಸಾಲ ನೀಡಬೇಡಿ ಸಾಲು
ಪ್ರತಿಭಟನಾಕರರು ಹಿಡಿದಿದ್ದ ಪ್ಲೇಕಾರ್ಡ್ಗಳಲ್ಲಿ 'State Bank of India, NO 1 Billion Adani loan' ಎಂದು ಬರೆಯಲಾಗಿತ್ತು. ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ನೀಡಬಾರದು ಎಂದು ಅದಾನಿ ವಿರೋಧಿ ಪರಿಸರವಾದಿಗಳು ಬರೆದಿದ್ದರು.
|
ಪರಿಸರಕ್ಕೆ ತೀವ್ರ ಹಾನಿ
ಕ್ವೀನ್ಸ್ಲ್ಯಾಂಡ್ನಲ್ಲಿರುವ ಅದಾನಿ ಸಮೂಹದ ಕಾರ್ಮಿಚೆಲ್ ಗಣಿಗೆ 20 ದಶಲಕ್ಷ ಡಾಲರ್ ಮೌಲ್ಯದ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವ ಗುತ್ತಿಗೆಯಿಂದ ಹಿಂದೆ ಸರಿಯುವಂತೆ ಪ್ರಮುಖ ಇಂಜಿನಿಯರಿಂಗ್ ಸಿಮನ್ಸ್ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ. ಗಣಿಗಾರಿಕೆಯಿಂದ ವಾರ್ಷಿಕವಾಗಿ 8 ರಿಂದ 10 ಮಿಲಿಯನ್ ಟನ್ ಗಳಷ್ಟು ಕಲಿದ್ದಲು ಉತ್ಪಾದನೆ ಹಾಗೂ ಇದರಿಂದ ಹೊರ ಹೊಮ್ಮುವ ಇಂಗಾಲದ ಪ್ರಮಾಣದ ಬಗ್ಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.