ಭಾರತದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಆಸ್ಟ್ರೇಲಿಯಾಗೆ ತೆರಳುವ ವಿಮಾನಗಳನ್ನು ನಿರ್ಬಂಧಿಸಿದೆ. ಹೀಗಾಗಿ ಭಾರತದಲ್ಲಿ ಐಪಿಎಲ್ನಲ್ಲಿ ಭಾಗಿಯಾಗಿರುವ ಆಟಗಾರರು ಹಾಗೂ ಸಿಬ್ಬಂದಿಗಳು ಈಗ ಆತಂಕದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಮೂಲದ ಕಾಮೆಂಟೇಟರ್ ಮೈಕಲ್ ಸ್ಲೇಟರ್ ಆಸಿಸ್ ಪ್ರಧಾನಿಯ ವಿರುದ್ಧ ಕಟು ಮಾತುಗಳಲ್ಲಿ ಟೀಕೆಯನ್ನು ಮಾಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್ ಅವರಲ್ಲದೆ ಕೋಚ್ ಆಗಿ ರಿಕಿ ಪಾಂಟಿಂಗ್, ಕಾಮೆಂಟೇಟರ್ಗಳಾಗಿ ಬ್ರೆಟ್ ಲೀ, ಮೈಕಲ್ ಸ್ಲೇಟರ್ ಅವರಂತಾ ಖ್ಯಾತನಾಮರು ಭಾಗಿಯಾಗಿದ್ದಾರೆ. ಆದರೆ ಭಾರತದಿಂದ ಆಸ್ಟ್ರೇಲಿಯಾಗೆ ಮರಳಲು ವಿಮಾನದ ವ್ಯವಸ್ಥೆ ಸ್ಥಗಿತವಾಗಿರುವುದು ಈ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಆಸಿಸ್ ಪ್ರದಾನ ಸ್ಲಾಟ್ ಮಾರಿಸನ್ ಆಸಿಸ್ ಆಟಗಾರರು ಅವರ ಜವಾಬ್ಧಾರಿಯಲ್ಲಿಯೇ ಮರಳ ಬೇಕೆಂದು ಕಠಿಣ ಮಾತುಗಳನ್ನು ಕೂಡ ಆಡಿದ್ದರು.
ಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆ
ಟ್ವಿಟ್ಟರ್ನಲ್ಲಿ ಸ್ಲೇಟರ್ "ನಮ್ಮ ಸರ್ಕಾರ ಆಸ್ಟ್ರೇಲಿಯನ್ನರ ಸುರಕ್ಷತೆಯ ಮೇಲೆ ಎಚ್ಚರಿಕೆಯನ್ನು ಹೊಂದಿದ್ದರೆ ತವರಿಗೆ ಮರಳಲು ಅವಕಾಶವನ್ನು ಮಾಡಿಕೊಡಬೇಕು. ಇದು ನಾಚಿಕೆಗೇಡಿನ ಸಂಗತಿ. ರಕ್ತ ನಿಮ್ಮ ಕೈಯ್ಯಲ್ಲಿ ಅಂಟಿಕೊಂಡಿದೆ ಪ್ರಧಾನಿಗಳೇ. ನಮ್ಮನ್ನು ಈ ರೀತಿ ಪರಿಗಣಿಸಲು ನಿಮಗೆಷ್ಟು ಧೈರ್ಯ. ಕ್ವಾರಂಟೈನ್ ನಿಯಮಗಳನ್ನು ಬದಲಾಯಿಸಲು ಹೇಗೆ ಸಾಧ್ಯವಾಗುತ್ತದೆ!. ಐಪಿಎಲ್ನಲ್ಲಿ ಕಾರ್ಯನಿರ್ವಹಿಸಲು ನಾನು ಸರ್ಕಾರದಿಂದ ಅಪ್ಪಣೆಯನ್ನು ಪಡೆದುಕೊಂಡಿದ್ದೇನೆ. ಆದರೆ ಸರ್ಕಾರ ಈಗ ಕಡೆಗಣನೆ ಮಾಡುತ್ತಿದೆ" ಎಂದು ಟ್ವೀಟ್ನಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಭಾಗಿಯಾಗಿರುವ 14 ಆಸ್ಟ್ರೇಲಿಯಾ ಮೂಲದ ಆಟಗಾರರು ಈಗ ಭಾರತದಲ್ಲಿದ್ದಾರೆ. ಸದ್ಯ ಐಪಿಎಲ್ ಬಯೋಬಬಲ್ನ ಒಳಗೂ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದು ಆತಂಕವನ್ನು ಮೂಡಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಕೊರೊನಾ ವೈರಸ್ಗೆ ತುತ್ತಾಗಿದ್ದು ಸೋಮವಾರ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ.