ಭಾರತ ತಪ್ಪಾಗಿ ಭಾವಿಸಿತ್ತು
'ಭಾರತ ವಿರುದ್ಧ ಇನ್ನಿಂಗ್ಸ್ ಆಡುತ್ತಿದ್ದಾಗ, ಡ್ರಿಂಕ್ಸ್ ಬ್ರೇಕ್ ವೇಳೆ ನಾನು 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೋಗಬಹುದು ಎಂದು ಯೋಚಿಸಿದೆ. ನನಗೆ ಆ ಬಳಿಕ ಯೋಚಿಸಲು ಹೆಚ್ಚು ಸಮಯ ಸಿಗಲಿಲ್ಲ. ಆದರೆ ಟೂರ್ನಿಯ ಮೊದಲ ಪಂದ್ಯವನ್ನಾಡುತ್ತಿದ್ದ ಭಾರತ, ನಮ್ಮೆದುರು ಒಳ್ಳೆಯ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಪಡೆದುಕೊಳ್ಳಬಹುದು ಎಂದುಕೊಂಡಿತ್ತು. ಯಾಕೆಂದರೆ ಅವರಿಗೆ ಮುಂದೆ ಬಲಿಷ್ಠ ತಂಡಗಳೆದುರು ಪಂದ್ಯವಿದ್ದರಿಂದ ನಮ್ಮೆದುರು ಅಭ್ಯಾಸ ಪಂದ್ಯದಲ್ಲಿ ಆಡಿದಷ್ಟು ಸುಲಭವಾಗಿ ಆಡಿ ಗೆಲ್ಲಬಹುದು ಎಂದುಕೊಂಡಿದ್ದರು,' ಎಂದು ರಹೀಮ್ ಹೇಳಿದ್ದಾರೆ.
ಹಸನ್ ಜೊತೆಗೆ ಒಳ್ಳೆ ಪಾರ್ಟ್ನರ್ಶಿಪ್
ಮಾತು ಮುಂದುವರೆಸಿದ ಮುಷ್ಫಿಕರ್, 'ಬ್ಯಾಟಿಂಗ್ ವೇಳೆ ನಮಗೆ ತಮೀಮ್ (ಇಕ್ಬಾಲ್) ಉತ್ತಮ ಆರಂಭ ನೀಡಿದ್ದರು. ನಾನು ಸೆಟ್ಟಾಗುತ್ತಿದ್ದೆ. ಮತ್ತೆ ನನಗೆ ಶಕೀಬ್ ಅಲ್ ಹಸನ್ ಜೊತೆಗೆ ಉತ್ತಮ ಪಾರ್ಟ್ನರ್ಶಿಪ್ ಲಭಿಸಿತು. ದೊಡ್ಡ ವೇದಿಕೆಯಾದರೂ ನಾವಿಬ್ಬರೂ ಅಂಡರ್ 19 ತಂಡದಲ್ಲಿ ಜೊತೆಯಾಗಿ ಆಡಿದ್ದರಿಂದ ಇದು ನನಗೆ ಕೊಂಚ ಸಮಾಧಾನ ತಂದಿತು,' ಎಂದರು.
ನನ್ನಿಂದಲೇ ನಂಬಲಾಗುತ್ತಿರಲಿಲ್ಲ
'ನಾನವತ್ತು ವಿಜಯದ ಹೊಡೆತಗಳನ್ನು ಕೊಡುತ್ತಿದ್ದಾಗ ನನ್ನಿಂದಲೇ ನಂಬಲಾಗುತ್ತಿರಲಿಲ್ಲ. ವಿಜಯದ ರನ್ ಬಾರಿಸುವ ಅವಕಾಶ ನೀಡಿದ್ದಕ್ಕಾಗಿ ನಾನು ಮೊಹಮ್ಮದ್ ಅಶ್ರಫುಲ್ಗೆ ಧನ್ಯವಾದ ಹೇಳಬೇಕು,' ಎಂದರು. ಆವತ್ತಿನ ಪಂದ್ಯದಲ್ಲಿ ತಮೀಮ್ ಇಕ್ಬಾಲ್ 51, ಮುಷ್ಫಿಕರ್ ರಹೀಮ್ ಅಜೇಯ 56 (107 ಎಸೆತ) ರನ್, ಶಕೀಬ್ ಅಲ್ ಹಸನ್ 53 ರನ್ ಬಾರಿಸಿದ್ದರು.
ಆಡಿದ್ದು ಯುವಿ, ದಾದ ಮಾತ್ರ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಪರ ಆವತ್ತು ಗಮನಾರ್ಹ ರನ್ ಕೊಡುಗೆ ನೀಡಿದ್ದು ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಮಾತ್ರ. ಗಂಗೂಲಿ 66, ಯುವಿ 47 ರನ್ ಬಾರಿಸಿದ್ದರು. ಭಾರತ 49.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದು 191 ರನ್ ಬಾರಿಸಿತ್ತು. 48.3 ಓವರ್ಗೆ 5 ವಿಕೆಟ್ ನಷ್ಟದಲ್ಲಿ 192 ರನ್ ಪೇರಿಸಿದ ಬಾಂಗ್ಲಾ 5 ವಿಕೆಟ್ ಗೆಲುವನ್ನಾಚರಿಸಿತ್ತು.