ನವದೆಹಲಿ: ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಗೆಗಿನ ಚರ್ಚೆಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆ ಕರೆದಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಸೀಸನ್ ಮತ್ತು ಟಿ20 ವಿಶ್ವಕಪ್ ವೇಳಾಪಟ್ಟಿಯ ಚರ್ಚೆಗಾಗಿ ಬಿಸಿಸಿಐ ಮೇ 29ರಂದು ಸಭೆ ಕರೆದಿದೆ.
'ಪಬ್ಜಿ' ಈಸ್ ಬ್ಯಾಕ್: ಇಂದಿನಿಂದ ಉಚಿತ ಮುಂಚಿತ-ನೋಂದಣಿ ಶುರು!
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ ಸಭೆಗೆ ಸಂಬಂಧಿಸಿ ಸೂಚನೆ ಹೋಗಿದೆ. 'ಭಾರತದಲ್ಲಿ ಸಂಕಷ್ಟ ತಂದೊಡ್ಡಿರುವ ಕೋವಿಡ್-19 ಪಿಡುಗಿನ ಮಧ್ಯೆ ಭಾರತದ ಮುಂದಿನ ಕ್ರಿಕೆಟ್ ಸೀಸನ್ ಆಯೋಜನೆ ಹೇಗೆಂಬ ಬಗ್ಗೆ ಚರ್ಚಿಸಲಾಗುತ್ತದೆ' ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್-ನವೆಂಬರ್ನಲ್ಲಿ ನಡೆಸಲುದ್ದೇಶಿಸಿರುವ ಟಿ20 ವಿಶ್ವಕಪ್ ಟೂರ್ನಿ, ಈ ಬಾರಿಯ ಕೊರೊನಾ ದ್ವಿತೀಯ ಅಲೆಯ ಮಧ್ಯೆ ನಡೆಯುತ್ತಾ ಅನ್ನೋ ಗಂಭೀರ ಅನುಮಾನ ಮೂಡಿಸಿದೆ. ಯಾಕೆಂದರೆ ಕೋವಿಡ್ ದ್ವಿತೀಯ ಅಲೆಯಿಂದಾಗಿ ಈಗಾಲೇ ಭಾರತ ತತ್ತರಿಸಿದ ಸ್ಥಿತಿಯಲ್ಲಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!
ಜೂನ್ 1ಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಬಿಸಿಸಿಐ ಸಭೆ ನಡೆಯಲಿದೆ. ಕೋವಿಡ್-19ನಿಂದಾಗಿ ಈಗಾಗಲೇ 14ನೇ ಆವೃತ್ತಿಯ ಐಪಿಎಲ್ ಮುಂದೂಡಲ್ಪಟ್ಟಿರುವುದರಿಂದ ಮುಂದೆ ಅಂತಾರಾಷ್ಟ್ರೀಯ ಟೂರ್ನಿಗಳನ್ನು ನಡೆಸುವ ಬಗ್ಗೆ ಬಿಸಿಸಿಐಗೆ ತಲೆನೋವು ಶುರುವಾಗಿದೆ.