ನವದೆಹಲಿ, ಮಾರ್ಚ್ 18: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ವಿಮಾನಯಾನದ ವೇಳೆ ವೆಚ್ಚ ಕಡಿತಕ್ಕೆ ಮುಂದಾಗಿದೆ. ಇನ್ಮುಂದೆ ಪಂದ್ಯಕ್ಕಾಗಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ತೆರಳುವಾಗ ಎಲ್ಲರಿಗೂ ಬ್ಯುಸಿನೆಸ್ ಕ್ಲಾಸ್ ಆಸನದಲ್ಲಿ ಕುಳಿತುಕೊಳ್ಳುವ ಅವಕಾಶ ಇರುವುದಿಲ್ಲ.
ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ ಸೆಲ್ಫ್ ಐಸೋಲೇಶನ್ಗೆ ಸೂಚನೆ
ಪಂದ್ಯಗಳಿಗಾಗಿ ಭಾರತ ತಂಡ ಪ್ರಯಾಣಿಸುವಾಗ ವಿಮಾನಯಾನದಲ್ಲಿನ ಬ್ಯುಸಿನೆಸ್ ಕ್ಲಾಸ್ ಆಸನ ಕೇವಲ ಮುಖ್ಯ ಆಯ್ಕೆದಾರರಿಗೆ ಮಾತ್ರ ಇರಲಿದೆ. ಆಯ್ಕೆ ಸಮಿತಿಯಲ್ಲಿರುವ ಇನ್ನಿತರರು ಎಕಾನಮಿ ಕ್ಲಾಸ್ ಆಸನ ವ್ಯವಸ್ಥೆಯಲ್ಲಿ ಪ್ರಯಾಣ ಮಾಡಬೇಕಾಗಿದೆ.
ಬಿಸಿಸಿಐಯು ಈ ತಿಂಗಳ ಮಧ್ಯೆ 'ಐಪಿಎಲ್ 2020' ನಡೆಸುವ ಸಾಧ್ಯತೆ ಹೆಚ್ಚು!
ಅಂದ್ಹಾಗೆ, ಈ ನಿರ್ಬಂಧ ಎಲ್ಲಾ ವಿಮಾನ ಪ್ರಯಾಣದ ವೇಳೆಯೂ ಅನ್ವಯವಾಗುವುದಿಲ್ಲ. ಬದಲಿಗೆ 7 ಗಂಟೆಗಳ ಒಳಗಿನ ಪ್ರಯಾಣಕ್ಕೆ ಮಾತ್ರ ಈ ನಿರ್ಬಂಧವಿರಲಿದೆ. ಉಳಿದಂತೆ ವಿದೇಶಿ ಪ್ರವಾಸದ ವೇಳೆ ಎಲ್ಲಾ ಆಯ್ಕೆದಾರರು ಬ್ಯುಸಿನೆಸ್ ಕ್ಲಾಸ್ನಲ್ಲಿ ಪಯಣಿಸಲು ಅವಕಾಶವಿದೆ.
ಟೀಮ್ ಇಂಡಿಯಾಗೆ ಧೋನಿ ಕಮ್ ಬ್ಯಾಕ್ಗೆ 'ಕನ್ನಡಿಗ' ಅಡ್ಡಿ ಎಂದ ಸೆಹ್ವಾಗ್
ವಿಮಾನ ಯಾನಕ್ಕೆ ಸಂಬಂಧಿಸಿ ಈ ಹೊಸ ನಿರ್ಬಂಧದ ಪ್ರಕಾರ, ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೂತನವಾಗಿ ನೇಮಿಸಲ್ಪಟ್ಟಿರುವ ಕನ್ನಡಿಗ ಸುನಿಲ್ ಜೋಶಿ ಮತ್ತು ಕಿರಿಯರ ತಂಡದ ಆಶೀಶ್ ಕಪೂರ್ ಮಾತ್ರ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸಬಹುದಾಗಿದೆ. ಉಳಿದಂತೆ ಎಲ್ಲರೂ ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸಬೇಕಾಗಿದೆ.