ನವದೆಹಲಿ: ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯಲ್ಲಿ ಗಡುವು ಕೇಳಿತ್ತು. ವರ್ಚುಯಲ್ ಸಭೆಯ ಮೂಲಕ ಐಸಿಸಿ-ಬಿಸಿಸಿಐ ಸಭೆ ನಡೆಸಿತ್ತು.
ಕೊಹ್ಲಿ ಪಡೆ 42 ದಿನ ವ್ಯರ್ಥವಾಗಿ ಇಂಗ್ಲೆಂಡ್ನಲ್ಲಿ ಏನು ಮಾಡಲಿದೆ? ಬಿಸಿಸಿಐಗೆ ಮಾಜಿ ಆಟಗಾರನ ಖಡಕ್ ಪ್ರಶ್ನೆ!
ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ, ಬಿಸಿಸಿಐಗೆ ಜೂನ್ 28ರ ವರೆಗೆ ನಡುವು ನೀಡಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್-19 ಕಾರಣ ಈಗ ತೊಂದರೆಯಾಗಿದೆ.
ಎಎನ್ಎ ಜೊತೆ ಮಾತನಾಡಿದ ಸೌರವ್ ಗಂಗೂಲಿ ಇದೇ ವಿಚಾರವನ್ನು ಖಾತರಿಪಡಿಸಿದ್ದಾರೆ. 'ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ತಾಳಿ ಐಸಿಸಿಗೆ ತಿಳಿಸಲು ನಮಗೆ ಜೂನ್ 28ರ ವರೆಗೆ ಕಾಲಾವಕಾಶ ಇದೆ' ಎಂದು ಗಂಗೂಲಿ ತಿಳಿಸಿದ್ದಾರೆ.
ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು
ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಅರಾಜಕತೆ ಸೃಷ್ಠಿಸಿದೆ. ಕೊರೊನಾ ಕಾರಣದಿಂದಲೇ ನಗದು ಶ್ರೀಮಂತ ಐಪಿಎಲ್ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು, ಈಗ ಯುಎಇಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳು ಕೊರೊನಾ ಸೋಂಕು ಕೊಂಚ ತಗ್ಗುವ ನಿರೀಕ್ಷೆಯಿರುವುದರಿಂದ ಐಸಿಸಿ, ಬಿಸಿಸಿಐಗೆ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ.