ಮುಂಬೈ: ಬಯೋ ಬಬಲ್ ಒಳಗೆ ಅನೇಕ ಆಟಗಾರರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಮಂಗಳವಾರ (ಮೇ 4) ಅಮಾನತುಗೊಳಿಸಲಾಗಿದೆ. ಉದ್ದೇಶಿತ ಟೂರ್ನಿ ಪೂರ್ಣಗೊಳ್ಳದ ಕಾರಣ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ (ಬಿಸಿಸಿಐ) ನಷ್ಟವಾಗಿದೆ.
ಭಾರತದಲ್ಲಿ ಕ್ವಾರಂಟೈನ್ಗೆ ಒಳಗಾದ ಸಿಎಸ್ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ
ಐಪಿಎಲ್ ಅಮಾನತಾಗಿ ಬಿಸಿಸಿಐ-ಐಪಿಎಲ್ ಆಡಳಿತ ಮಂಡಳಿಗೆ ನಷ್ಟವಾಗಿರುವ ಹೊರತಾಗಿಯೂ ಬಿಸಿಸಿಐ ಮತ್ತು ಐಪಿಎಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ ಪರಿಹಾರಾರ್ಥವಾಗಿ ಬಿಸಿಸಿಐ ಮತ್ತು ಐಪಿಎಲ್ ಎರಡೂ ಪರಿಹಾರ ನೀಡಿಲ್ಲ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸುರೀಂದರ್ ಖನ್ನಾ ಹೇಳಿದ್ದಾರೆ.
'ಬಿಸಿಸಿಐ ಮತ್ತು ಐಪಿಎಲ್ ಕೋವಿಡ್ ಪರಿಹಾರಕ್ಕೆ 100 ಕೋಟಿ ರೂ. ನೀಡಬೇಕು,' ಎಂದು ಸುರೀಂದರ್ ಖನ್ನಾ ಒತ್ತಾಯಿಸಿದ್ದಾರೆ. ಇಂಡಿಯನ್ ಕ್ರಿಕೆಟ್ ಅಸೋಸಿಯೇಶನ್ನಲ್ಲಿದ್ದ ಖನ್ನಾ ಕಳೆದ ಬಾರಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದರು.
ಭಾರತೀಯರು ಮಾಡಿರದ ವಿಶೇಷ ದಾಖಲೆ ಬರೆದ ರಿಷಭ್ ಪಂತ್
ಐಪಿಎಲ್ ಪಂದ್ಯಗಳು ಅರ್ಧಕ್ಕೆ ನಿಂತಿದ್ದರಿಂದ ಬಿಸಿಸಿಐಗೆ ಸುಮಾರು 2000+ ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಕೆಲವಾರು ವರದಿಗಳು ಹೇಳಿದ್ದವು. ಆದರೂ ಖನ್ನಾ ಈ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಬಿಸಿಸಿಐಗೆ ಲಾಭವಾಗುವ ಹಣ ನಷ್ಟವಾಗಿಯೇ ಹೊರತು ಅದಕ್ಕೆ ಹಣಕಾಸಿನ ಅಭಾವ ಇಲ್ಲ ಎಂದು ಖನ್ನಾ ಹೇಳಿದ್ದಾರೆ.