ಸಭೆ ಕರೆದಿದ್ದ ಜೋಶಿ ಬಳಗ
ಮಾರ್ಚ್ 12ರಿಂದ ಅಹಮದಾಬಾದ್ನ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ತಂಡ ಆರಿಸುವ ನಿಟ್ಟಿನಲ್ಲಿ ಸುನಿಲ್ ಜೋಶಿ ಮುಂದಾಳತ್ವದ ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಸಿತ್ತು. ಈ ಸಭೆಯ ಬಳಿಕ ಆಯ್ಕೆ ಸಮಿತಿ ಸುದ್ದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿತು.
ಧೋನಿ ಪ್ರದರ್ಶನ ನೀಡಬೇಕು
ನೂತನ ಆಯ್ಕೆ ಸಮಿತಿಯೂ ಎಂಎಸ್ ಧೋನಿ ಬಗೆಗಿನ ನಿಲುವು ಬದಲಿಸಿದಂತೆ ಕಾಣುತ್ತಿಲ್ಲ. ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಆಯ್ಕೆ ಸಮಿತಿ, ಮುಂಬರಲಿರುವ ಟಿ20 ವಿಶ್ವಕಪ್ನಲ್ಲಿ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಬೇಕಾದರೆ, ಧೋನಿ ಐಪಿಎಲ್ನಲ್ಲಿ ಪ್ರದರ್ಶನ ನೀಡಬೇಕು ಎಂದು ಹಳೆ ರಾಗವನ್ನೇ ತೆಗೆದಿದೆ.
ಧೋನಿ ಈ ಬಾರಿಯ ಲೆಕ್ಕಾಚಾರದಲ್ಲಿಲ್ಲ
'ಇದು ಬಹಳ ಸರಳವಾದ ಆಯ್ಕೆ ಸಭೆ ಮತ್ತು ಧೋನಿ ಈ ಬಾರಿಯ ನಮ್ಮ ಲೆಕ್ಕಾಚಾರದಲ್ಲಿಲ್ಲದ (ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ) ಕಾರಣ ಆತನ ಭವಿಷ್ಯದ ಬಗ್ಗೆ ಔಪಚಾರಿಕ ಮಾತುಗಳಿಲ್ಲ. ಐಪಿಎಲ್ನಲ್ಲಿ ಧೋನಿ ಆಡಿದರೆ ಮಾತ್ರ ತಂಡಕ್ಕೆ ಮರಳಬಹುದು,' ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.
ಧೋನಿಯೇ ಯಾಕೆ ಬೇಕು, ಬೇರೆಯವರಿಲ್ಲವೆ?
ಮಾತು ಮುಂದುವರೆಸಿದ ಬಿಸಿಸಿಐ ಅಧಿಕಾರಿಗಳು, 'ಐಪಿಎಲ್ನಲ್ಲಿ ಬರೀ ಧೋನಿಯ ಪ್ರದರ್ಶನ ಮಾತ್ರ ಯಾಕೆ ಪರಿಗಣಿಸಬೇಕು? ಅನುಭವಿ, ಯುವ ಆಟಗಾರರು ಬೇರೆಯವರಿಲ್ಲವೆ? ಒಂದು ವೇಳೆ ಧೋನಿಗಿಂತ ಬೇರೆಯವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರನ್ನೇ ಪರಿಗಣಿಸುತ್ತೇವೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ತಂಡದಲ್ಲಿ ನಿಮಗೆ ಅಚ್ಚರಿಯ ಸೇರ್ಪಡೆಯೂ ಇರಬಹುದು,' ಎಂದಿದ್ದಾರೆ.