ಮಂಡಳಿಗಳ ಕೈಯ್ಯಲ್ಲಿ ಇಲ್ಲ
40ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಯ ನಿರ್ಧಾರ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ಕೈಯಲ್ಲಿ ಇಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಧೋನಿ ಫೋಟೋ ಹಾಕಿದ ಜಾನ್ ಸೀನಾ; ನ.14ರ ಕ್ರಿಕೆಟ್ ಸುದ್ದಿಗಳು
ಸರ್ಕಾರಗಳು ಈ ಬಗ್ಗೆ ನಿರ್ಧಾರ ಮಾಡಬೇಕು
"ವಿಶ್ವಮಟ್ಟದ ಟೂರ್ನಮೆಂಟ್ಗಳಲ್ಲಿ ಎರಡು ದೇಶಗಳ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತವೆ. ದ್ವಿಪಕ್ಷೀಯ ಕ್ರಿಕೆಟ್ ಅನ್ನು ವರ್ಷಗಳಿಂದೀಚೆಗೆ ಸ್ಥಗಿತಗೊಳಿಸಲಾಗಿದೆ. ಇದು ಮುಂದಿವರಿಸಲು ಆಯಾ ದೇಶಗಳು ನಿರ್ಧಾರ ಮಾಡಬೇಕಾಗಿದೆ. ಈ ವಿಚಾರ ರಮೀಜ್ ರಾಜಾ ಅವರ ಕೈಯ್ಯಲ್ಲಿ ಅಥವಾ ನನ್ನ ಕೈಯ್ಯಲ್ಲಿ ಇಲ್ಲ" ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.
ದ್ವಿಪಕ್ಷೀಯ ಸರಣಿ ಬಯಸಿದ ರಮೀಜ್ ರಾಜಾ
ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಬಳಿ ಈ ಪ್ರಶ್ನೆ ಎದುರಾಗಿದ್ದಾಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಳಿ ಈ ವಿಚಾರವಾಗಿ ನಾನು ಮಾತನಾಡುತ್ತೇನೆ ಎಂದಿದ್ದರು. ಈ ಸಂದರ್ಭದಲ್ಲಿ ರಮೀಜ್ ರಾಜಾ 'ಕ್ರೀಡೆ ರಾಜಕೀಯದಿಂದ ದೂರವುಳಿಯಬೇಕು' ಎಂಬ ಮಾತನ್ನು ಹೇಳಿದ್ದರು.
ಕ್ರಿಕೆಟ್ ಬಾಂಧವ್ಯದ ಬಗ್ಗೆ ರಾಜಾ ಮಾತು!
ಎಸಿಸಿ(ಏಶ್ಯನ್ ಕ್ರಿಕೆಟ್ ಕೌನ್ಸಿಲ್) ಸಭೆಗಳ ಹಿನ್ನೆಲೆಯಲ್ಲಿ ನಾನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ನಾವು ಕ್ರಿಕೆಟ್ ಬಾಂಧವ್ಯವನ್ನು ರಚಿಸಬೇಕಾಗಿದೆ. ರಾಜಕೀಯ ಕ್ರೀಡೆಯಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ನಾನು ನಂಬಿದ್ದೇನೆ. ಇದು ನಮ್ಮ ನಿಲುವು" ಎಂದು ಮಾತನಾಡಿದ್ದರು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ.