ನವದೆಹಲಿ: ಹೃದಯಬೇನೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಇಂದು (ಜನವರಿ 28) ಮತ್ತೊಂದು ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
ಇತ್ತೀಚೆಗಷ್ಟೇ ಹೃದಯಾಘಾತಕ್ಕೊಳಗಾಗಿದ್ದ ದಾದಾ ಸೌರವ್ ಗಂಗೂಲಿಗೆ ಯಶಸ್ವಿ ಆ್ಯಂಜಿಯೋಪ್ಲ್ಯಾಸ್ಟಿ ಸರ್ಜರಿ ಚಿಕಿತ್ಸೆ ನಡೆದಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಗಂಗೂಲಿ, ಮತ್ತೆ ಎದೆನೋವಿನಿಂದಾಗಿ ಕೋಲ್ಕತ್ತಾದ ಅಪೊಲೋ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿರುವ ಗಂಗೂಲಿಗೆ ಮತ್ತೊಂದು ಸ್ಟೆಂಟ್ಸ್ (ಅಡ್ಡಗಟ್ಟಿರುವ ರಕ್ತನಾಳದೊಳಕ್ಕೆ ಟ್ಯೂಬ್ ಹಾಕಿ ರಕ್ತ ಸಂಚಾರ ಸರಾಗವಾಗುವಂತೆ ಮಾಡುವ ವಿಧಾನ) ಚಿಕಿತ್ಸೆ ನಡೆಯಲಿದೆ. ಹೃದಯ ಸಂಬಂಧಿ ವೈದ್ಯ ಡಾ. ಅಫ್ತಾಬ್ ಖಾನ್, ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಮತ್ತು ಸರೋಜ್ ಮಂಡಲ್ ಸಮ್ಮುಖದಲ್ಲಿ ಗಂಗೂಲಿಗೆ ಚಿಕಿತ್ಸೆ ನಡೆಯಲಿದೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮುಂದೂಡಿದ ಐಸಿಸಿ
'ಡಾ.ಸಪ್ತರ್ಷಿ ಬಸು ಮತ್ತು ಡಾ. ಸರೋಜ್ ಮಂಡಲ್ ಚಿಕಿತ್ಸೆಯಲ್ಲಿ ಭಾಗವಹಿಸುತ್ತಿದ್ದಾರೆ. ಡಾ. ಅಫ್ತಾಬ್ ಖಾನ್ ಅವರು ನಾಳೆ (ಗುರುವಾರ) ಡಾ.ದೇವಿ ಶೆಟ್ಟಿ ಅವರ ಸಮ್ಮುಖದಲ್ಲಿ ಸ್ಟೆಂಟಿಂಗ್ ಮಾಡಲಿದ್ದಾರೆ,' ಎಂದು ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯ ಪ್ರಕಟಣೆ ಬುಧವಾರ (ಜನವರಿ 27) ತಿಳಿಸಿತ್ತು.