ಈ ವರ್ಷಾಂತ್ಯ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುನ್ನ ಹಾರ್ದಿಕ್ ಪಾಂಡ್ಯ ಮುಂದಿನ ಕೆಲವು ತಿಂಗಳುಗಳ ಕಾಲ ಮಾತ್ರ ಟಿ20 ಕ್ರಿಕೆಟ್ ಆಡಬೇಕು ಎಂದು ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ವೈಭವಯುತವಾಗಿ ಗುಜರಾತ್ ಟೈಟನ್ಸ್ (ಜಿಟಿ) ನಾಯಕತ್ವದ ನಂತರ ಹಾರ್ದಿಕ್ ಪಾಂಡ್ಯ ಮುಂದಿನ ವಾರದಿಂದ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಭಾರತ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಟಿ20 ಸರಣಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಭಾರತ ತಂಡದ ಮಾಜಿ ನಾಯಕ ಹೇಳಿದ್ದೇನು?
ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ 15 ಪಂದ್ಯಗಳಿಂದ 44.27 ಸರಾಸರಿಯಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ 487 ರನ್ ಗಳಿಸಿದರು. ಇದಲ್ಲದೆ ಪಾಂಡ್ಯ, ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧದ ಫೈನಲ್ನಲ್ಲಿ ಮೂರು ಪ್ರಮುಖ ವಿಕೆಟ್ ಸೇರಿದಂತೆ ಟೂರ್ನಿಯಲ್ಲಿ ಎಂಟು ವಿಕೆಟ್ಗಳನ್ನು ಪಡೆದರು. ಐಪಿಎಲ್ ಫೈನಲ್ನ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಅವರ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ. 1983ರ ವಿಶ್ವಕಪ್ ಗೆದ್ದ ಭಾರತದ ತಂಡದ ಭಾಗವಾಗಿರುವ ಅನುಭವಿ ರವಿಶಾಸ್ತ್ರಿ, ಸದ್ಯ ಹಾರ್ದಿಕ್ ಪಾಂಡ್ಯ ಪ್ರತಿ ಪಂದ್ಯದಲ್ಲೂ ಒಂದೆರಡು ಓವರ್ಗಳನ್ನು ಬೌಲ್ ಮಾಡುವಷ್ಟು ಫಿಟ್ನೆಸ್ ಗಳಿಸಿದ್ದಾರೆ ಎಂದು ಹೇಳಿದರು.
ಹಾರ್ದಿಕ್ ಕುರಿತು ರವಿಶಾಸ್ತ್ರಿ ಏನು ಮಾತನಾಡಿದ್ದಾರೆ?
"ಅವರು ಬ್ಯಾಟರ್ ಆಗಿ ಅಥವಾ ಆಲ್ರೌಂಡರ್ ಆಗಿ ಭಾರತ ತಂಡಕ್ಕೆ ಹಿಂತಿರುಗುತ್ತಾರೆ. ಅವರು ನಿಮಗೆ ಎರಡು ಓವರ್ಗಳನ್ನು ಬೌಲ್ ಮಾಡಲು ಸಾಧ್ಯವಾಗದಂತಹ ಕೆಟ್ಟದಾಗಿ ಗಾಯಗೊಂಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಸಾಕಷ್ಟು ವಿಶ್ರಾಂತಿ ಪಡೆದಿದ್ದಾರೆ ಮತ್ತು ಅವರು ಅದನ್ನು ಮುಂದುವರಿಸುತ್ತಾರೆ".
"ಸಾಕಷ್ಟು ವಿಶ್ರಾಂತಿ ಪಡೆದ ಅವರು ಟಿ20 ವಿಶ್ವಕಪ್ಗೆ ಆಡಬೇಕಾದ ಏಕೈಕ ಸ್ವರೂಪವಾಗಿದೆ. ಹಾರ್ದಿಕ್ ಪಾಂಡ್ಯ ಅವರು ಏಕದಿನ ಕ್ರಿಕೆಟ್ನಲ್ಲಿ ಆಡುವಂತೆ ಮಾಡುವ ಅಪಾಯವನ್ನು ಬಿಸಿಸಿಐ ಕೂಡ ತೆಗೆದುಕೊಳ್ಳಬಾರದು," ಎಂದು ಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ ಶೋ ಗೇಮ್ ಪ್ಲಾನ್ನಲ್ಲಿ ಉಲ್ಲೇಖಿಸಿದ್ದಾರೆ.
"ಹಾರ್ದಿಕ್ ಪಾಂಡ್ಯ ಕೇವಲ ಬ್ಯಾಟರ್ ಆಗಿ ಆಡಿದರೆ ಅವರು ಅಗ್ರ ನಾಲ್ಕು ಅಥವಾ ಐದರಲ್ಲಿ ಬ್ಯಾಟ್ ಮಾಡಬೇಕು. ಆದರೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಆಡುತ್ತಾರೆ. ಅವರು ಐದು, ಆರು ಅಥವಾ ನಾಲ್ಕರಲ್ಲಿ ಬ್ಯಾಟ್ ಮಾಡಬಹುದು. ಇನ್ನೂ ಆ ಎರಡು-ಮೂರು ಓವರ್ಗಳನ್ನು ತಂಡಕ್ಕಾಗಿ ಬೌಲ್ ಮಾಡುತ್ತಾರೆ," ಎಂದು ರವಿಶಾಸ್ತ್ರಿ ತಿಳಿಸಿದರು.