ಪ್ರಭಾವ ಬಳಸಿ ಬಿಸಿಸಿಐ ಮುಂದೂಡಿಕೆ ಯತ್ನ!
ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಐಪಿಎಲ್ ಮುಂದೂಡಿಕೆಯಿಂದಾಗುವ ನಷ್ಟವನ್ನು ತಪ್ಪಿಲು ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿ ವಿಶ್ವಕಪ್ ಬಲಿ ಕೊಡುವ ಪ್ರಯತ್ನಗಳನ್ನು ತನ್ನ ಪ್ರಭಾವ ಬಳಸಿಕೊಂಡು ಮಾಡುತ್ತಿದೆ ಎಂದು ಆಸಿಸ್ ಮಾಧ್ಯಮಗಳು ಆರೋಪಿಸುತ್ತಿದೆ.
ಬಿಸಿಸಿಐ ಸ್ಪಷ್ಟನೆ
ಈ ಬಗ್ಗೆ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಲ್ ಪ್ರತಿಕ್ರಿಯಿಸಿದ್ದು, ಬಿಸಿಸಿಐ ಯಾವ ಕಾರಣಕ್ಕಾಗಿ ವಿಶ್ವಕಪ್ ಮುಂದೂಡುವ ಪ್ರಯತ್ನ ಮಾಡುತ್ತದೆ ಎಂದು ಮರು ಪ್ರಶ್ನಿಸಿದ್ದಾರೆ. ಮುಂದಿನವಾರ ಈ ಬಗ್ಗೆ ಐಸಿಸಿ ಸಭೆ ನಡೆಸಲಿದ್ದು ಬಿಸಿಸಿಐ ವಿಶ್ವಕಪ್ ಮುಂದೂಡುವ ಬಗ್ಗೆ ಯಾವುದೇ ಶಿಫಾರಸ್ಸು ಮಾಡುವುದಿಲ್ಲ ಎಂದಿದ್ದಾರೆ.
ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ
ಆಸ್ಟ್ರೇಲಿಯಾ ಸರ್ಕಾರ ವಿಶ್ವಕಪ್ ಕ್ರಿಕೆಟ್ ನಡೆಸಲು ಹಸಿರು ನಿಶಾನೆ ತೋರಿದರೆ ಖಂಡಿತಾ ವಿಶ್ವಕಪ್ ನಡೆಯುತ್ತದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೆ ತೆಗೆದುಕೊಳ್ಳಿದೆ. ವಿಶ್ವಕಪ್ ಕುರಿತಾಗಿ ತೀರ್ಮಾನ ತೆಗೆದುಕೊಳ್ಳುವವರೆಗೂ ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಐಸಿಸಿ ನಿರ್ಧಾರ ಅಧಿಕೃತವಾಗಿಲ್ಲ
ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಾಗಿತ್ತು. ಆದರೆ ವಿಶ್ವಾದ್ಯಂತ ಕೊರೊನಾ ವೈರಸ್ ಹಾವಳಿ ತೀವ್ರವಾಗಿರುವ ಕಾರಣ ಮುಂದೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಸದ್ಯ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮುಂದಿನ ವಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.