ಶಾಂತ ಮತ್ತು ಶ್ರೇಷ್ಠ ಮನುಷ್ಯ
ಯೂಟ್ಯೂಬ್ ಚಾಟ್ ಶೋನಲ್ಲಿ ಅನಿಸ್ ಸಾಜನ್ ಜೊತೆ ಮಾತನಾಡಿದ ಮೊಹಮ್ಮದ್ ನಬಿ, ಧೋನಿ ಜೊತೆಗಿನ ಮಾತುಕತೆಗಳನ್ನು ನೆನಪಿಸಿಕೊಂಡಿದ್ದಾರೆ. ಧೋನಿಯನ್ನು ಶ್ರೇಷ್ಠ ವ್ಯಕ್ತಿ ಎಂದು ಕರೆದರು. 'ಧೋನಿ ಒಬ್ಬ ಅತ್ಯುತ್ತಮ, ಶಾಂತ ಮತ್ತು ಶ್ರೇಷ್ಠ ಮನುಷ್ಯ,' ಎಂದು ನಬಿ ಹೇಳಿದರು.
ಕಳೆದ ಬಾರಿಯೂ ಫೈನಲ್ಗೇರಿದ್ದ ಸಿಎಸ್ಕೆ
ಧೋನಿ ಕ್ಯಾಪ್ಟನ್ಸಿಯಡಿಯಲ್ಲಿ ಸಿಎಸ್ಕೆ ತಂಡ ಒಟ್ಟು ಮೂರು ಬಾರಿ ಚಾಂಪಿಯನ್ ಆಗಿದೆ. ಕಳೆದ ಬಾರಿಯೂ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ತಂಡಗಳು ಫೈನಲ್ನಲ್ಲಿ ಕಾದಾಡಿದ್ದವು. ಆದರೆ ರೋಹಿತ್ ಶರ್ಮಾ ನಾಯಕತ್ವದ ಎಂಐ ಪ್ರಶಸ್ತಿ ಗೆದ್ದು, ನಾಲ್ಕನೇ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.
ರೂಮ್ ಬಾಗಿಲು ಇಡೀ ದಿನ ತೆರೆದಿರುತ್ತದೆ
ಮಾತು ಮುಂದುವರೆಸಿದ ನಬಿ, 'ಜೊತೆಯಲ್ಲಿ ಟೀ ಕುಡಿಯಲು ಅಥವಾ ಮಾತನಾಡಲು ಬಯಸುವ ಪ್ರತಿಯೊಬ್ಬರಿಗೂ ಧೋನಿ ರೂಮಿನ ಬಾಗಿಲು 24X7 ಸಮಯ ತೆರೆದೇ ಇರುತ್ತದೆ. ನಾನು ಧೋನಿಯನ್ನು ಒಂದೆರಡು ಬಾರಿ ಭೇಟಿ ಮಾಡಿದ್ದೇನೆ. ಆತ ನಿಜಕ್ಕೂ ಒಳ್ಳೆಯ ಮನುಷ್ಯ,' ಎಂದಿದ್ದಾರೆ.
ಮೈದಾನಕ್ಕಿಳಿಯದ ಧೋನಿ
2019ರ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದ ಬಳಿಕ, ಧೋನಿ ಯಾವುದೇ ಪಂದ್ಯವನ್ನಾಡಿಲ್ಲ. ಐಪಿಎಲ್ ಆರಂಭವಾಗಿದ್ದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಮೈದಾನಕ್ಕಿಳಿಯುತ್ತಿದ್ದರು. ಆದರೆ ಕೊರೊನಾದಿಂದ ಐಪಿಎಲ್ ಮುಂದೂಡಲ್ಪಟ್ಟಿರುವುದರಿಂದ ಧೋನಿ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಬೇಕಾಗಿದೆ.