ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಈತನ ಸ್ಥಾನ ಖಚಿತ; ಚೇತೇಶ್ವರ ಪೂಜಾರ

Bhuvneshwar Kumar Will Be In Indian Squad For T20 World Cup 2022 Says Cheteshwar Pujara

ಸದ್ಯ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಕಳಪೆ ಪ್ರದರ್ಶನದಿಂದಾಗಿ ಫೈನಲ್ ತಲುಪದೆ ಹೊರಬಿದ್ದ ನಂತರ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐದು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಎಲ್ಲರ ಕಣ್ಣುಗಳು ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಮೇಲಿದೆ.

ಈ ಮೆಗಾ ಟೂರ್ನಿಗಾಗಿ ಭಾರತವು ತನ್ನ ಪೂರ್ಣ ತಂಡವನ್ನು ಸೆಪ್ಟೆಂಬರ್ 15ರಂದು ಘೋಷಿಸುತ್ತದೆ ಮತ್ತು ಅಲ್ಲಿಯವರೆಗೆ ಗಡುವು ನೀಡಲಾಗಿದೆ. ಭಾರತ ತಂಡದ ಘೋಷಣೆಗೆ ಮುಂಚಿತವಾಗಿ ಅನೇಕ ಕ್ರಿಕೆಟ್ ತಜ್ಞರು ಟಿ20 ವಿಶ್ವಕಪ್‌ಗಾಗಿ ತಮ್ಮ ಅಂತಿಮ 15ರ ತಂಡವನ್ನು ಹೆಸರಿಸುತ್ತಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಪೂರ್ಣ ತಂಡ ಹೆಸರಿಸಿದ ಆರ್‌ಪಿ ಸಿಂಗ್; ಈ ವೇಗಿಗೆ ಸ್ಥಾನವಿಲ್ಲಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಪೂರ್ಣ ತಂಡ ಹೆಸರಿಸಿದ ಆರ್‌ಪಿ ಸಿಂಗ್; ಈ ವೇಗಿಗೆ ಸ್ಥಾನವಿಲ್ಲ

ಇದೇ ವೇಳೆ ಮುಂಬರುವ ಟಿ20 ವಿಶ್ವಕಪ್‌ಗೆ ಭುವನೇಶ್ವರ್ ಕುಮಾರ್ ಭಾರತ ತಂಡದ ಭಾಗವಾಗಿರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭಾರತೀಯ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ ಪೂಜಾರ ಹೇಳಿದ್ದಾರೆ.

ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ

ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ

ಭುವನೇಶ್ವರ್ ಕುಮಾರ್ ಅವರು ಈ ವರ್ಷ ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅದ್ಭುತವಾದ ಬೌಲಿಂಗ್ ಮಾಡಿದರು, ಅಲ್ಲಿ ಅವರು ಕೇವಲ ನಾಲ್ಕು ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದು ಭಾರತ ತಂಡ ಗೆಲ್ಲಲು ಸಹಾಯ ಮಾಡಿದರು.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋದಲ್ಲಿ ಮಾತನಾಡಿದ ಚೇತೇಶ್ವರ ಪೂಜಾರ, ಭಾರತೀಯ ವೇಗಿ ಭುವನೇಶ್ವರ್ ಕುಮಾರ್ ಉತ್ತಮ ಗುಣಮಟ್ಟದ ಬೌಲರ್ ಎಂದು ಶ್ಲಾಘಿಸಿದರು ಮತ್ತು ಅವರು ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ತಂಡದ ಭಾಗವಾಗಲಿದ್ದಾರೆ ಎಂದು ಹೇಳಿದರು. ಡೆತ್ ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಇರಲಿರುವುದರಿಂದ ಪವರ್‌ಪ್ಲೇನಲ್ಲಿ ಕುಮಾರ್ ಅವರನ್ನು ಬೌಲ್ ಮಾಡಲು ಭಾರತ ಶಕ್ತವಾಗಿದೆ ಎಂದು ಅವರು ಹೇಳಿದರು.

ಭುವನೇಶ್ವರ್ ವಿಶ್ವಕಪ್ ತಂಡದ ಭಾಗವಾಗಿರುವುದರ ಬಗ್ಗೆ ಸಂದೇಹವಿಲ್ಲ

ಭುವನೇಶ್ವರ್ ವಿಶ್ವಕಪ್ ತಂಡದ ಭಾಗವಾಗಿರುವುದರ ಬಗ್ಗೆ ಸಂದೇಹವಿಲ್ಲ

"ಭುವನೇಶ್ವರ್ ಕುಮಾರ್ ಉತ್ತಮ ಗುಣಮಟ್ಟದ ಬೌಲರ್ ಎಂದು ನಾನು ಭಾವಿಸುತ್ತೇನೆ. ಅವರು ವಿಶ್ವಕಪ್ ತಂಡದ ಭಾಗವಾಗಿರುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಅವರು ಆಡುವ ಹನ್ನೊಂದರ ಭಾಗವಾಗಬೇಕು. ಅರ್ಶ್‌ದೀಪ್ ಸಿಂಗ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಆದರೆ ಅಫ್ಘಾನಿಸ್ತಾನ ವಿರುದ್ಧದ ಪ್ರದರ್ಶನದ ನಂತರ, ನಮಗೆ ಅಗತ್ಯವಿದ್ದರೆ ಪವರ್‌ಪ್ಲೇನಲ್ಲಿ ಮೂರು ಓವರ್‌ಗಳನ್ನು ಬೌಲ್ ಮಾಡಲು ನಾವು ಶಕ್ತರಾಗಿದ್ದೇವೆ, ಏಕೆಂದರೆ ನಮ್ಮಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಇದ್ದಾರೆ, ಅವರು ಡೆತ್‌ನಲ್ಲಿ ಬೌಲಿಂಗ್ ಮಾಡಬಹುದು," ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟರು.

ಭುವನೇಶ್ವರ್ ಕುಮಾರ್ ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಕುರಿತು ಮಾತನಾಡಿದ ಚೇತೇಶ್ವರ ಪೂಜಾರ, "ಭಾರತೀಯ ವೇಗಿಗಳಿಗೆ ಸಂಪೂರ್ಣ ತರಬೇತಿ ಅಗತ್ಯವಿಲ್ಲ ಮತ್ತು ಅವರ ಫಾರ್ಮ್ ಮತ್ತು ಲಯವನ್ನು ಕಾಪಾಡಿಕೊಳ್ಳಲು ಆಟದ ಸಮಯವನ್ನು ನೀಡಬೇಕು," ಎಂದು ಹೇಳಿದರು.

ಕೇವಲ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ

ಕೇವಲ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ

"ದೊಡ್ಡ ವಿಶ್ವಕಪ್ ಬರಲಿದೆ ಎಂದು ನಾನು ಭಾವಿಸುತ್ತೇನೆ, ನಾವು ಇನ್ನೂ ಭುವನೇಶ್ವರ್ ಕುಮಾರ್ ಆಡಿಸುತ್ತೇವೆ. ಆದರೆ ಅವನು ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಬಹುಶಃ ಮೂರು ಪ್ರಮುಖ ಪಂದ್ಯಗಳಲ್ಲಿ ಭುವನೇಶ್ವರ್ ಮೊದಲ ಎರಡು ಪಂದ್ಯಗಳನ್ನು ಆಡುತ್ತಾರೆ ಮತ್ತು ಭಾರತ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಮೂರನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಬಹುದು," ಎಂದು ಪೂಜಾರ ಸಲಹೆ ನೀಡಿದರು.

"ಭುವನೇಶ್ವರ್ ಕುಮಾರ್ ರೆಡ್ ಬಾಲ್ ಕ್ರಿಕೆಟ್ ಆಡುತ್ತಿದ್ದರೆ ಸಾಕಷ್ಟು ಕೆಲಸದ ಹೊರೆ ಇರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅವರು ಕೇವಲ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. ವಿಶ್ವಕಪ್‌ಗೆ ಮುನ್ನ ಅವರು ಇನ್ನೂ ಕೆಲವು ಪಂದ್ಯಗಳನ್ನು ಪಡೆದರೆ ಅದು ಅವರಿಗೆ ಸಹಾಯ ಮಾಡುತ್ತದೆ ಎಂದು ನಾನು ಈಗಲೂ ಭಾವಿಸುತ್ತೇನೆ," ಎಂದು ಭಾರತೀಯ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಹೇಳಿದರು.

Story first published: Sunday, September 11, 2022, 13:24 [IST]
Other articles published on Sep 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X