ಭಾರತ ಗೆಲ್ಲುವ ವಿಶ್ವಾಸದಲ್ಲಿತ್ತು
ಪಂದ್ಯ ಡ್ರಾ ಆಗಿರುವುದರ ಕುರಿತು ಮಾತನಾಡಿದ ಜಹೀರ್ ಖಾನ್ ಮಳೆ ಆಗಮನವಾದದ್ದು ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಿಗೂ ಅನುಕೂಲವೆನಿಸಿರುತ್ತದೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಜಹೀರ್ ಖಾನ್ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಐದನೇ ದಿನ ಮಳೆ ಆಗಮನವಾಗುವ ಸಮಯಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ಒಂದೇ ಒಂದು ಕಳೆದುಕೊಂಡು ಒಂಬತ್ತು ವಿಕೆಟ್ ಉಳಿಸಿಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಇನ್ನೂ ಒಂಬತ್ತು ವಿಕೆಟ್ಗಳು ಕೈನಲ್ಲಿದ್ದ ಟೀಮ್ ಇಂಡಿಯಾ ಗೆಲ್ಲುವ ವಿಶ್ವಾಸದಲ್ಲಿತ್ತು ಎಂದು ಜಹೀರ್ ಖಾನ್ ಹೇಳಿದ್ದಾರೆ.
ಅತ್ತ ಇಂಗ್ಲೆಂಡ್ ಕೂಡ ಮೇಲುಗೈ ಸಾಧಿಸಿತ್ತು
ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ಇಂಗ್ಲೆಂಡ್ ತಂಡ ಎರಡನೆ ಇನ್ನಿಂಗ್ಸ್ನಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ 303 ರನ್ ಗಳಿಸಿ ಟೀಮ್ ಇಂಡಿಯಾಗೆ 208 ರನ್ಗಳ ಗುರಿ ನೀಡಿತು. ಮೊದಲ ಇನ್ನಿಂಗ್ಸ್ನಲ್ಲಿ 200ರ ಗಡಿ ದಾಟಲು ಪರದಾಡಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಗಿಸಿ 208 ರನ್ ಟಾರ್ಗೆಟ್ ನೀಡುವಷ್ಟು ವಿಶ್ವಾಸದ ಆಟವನ್ನಾಡಿತ್ತು. ಐದನೇ ದಿನ ಮಳೆಯ ಆಗಮನವಾದಾಗ ಇಂಗ್ಲೆಂಡ್ ತಂಡ ಕೂಡ ವಿಶ್ವಾಸದಲ್ಲಿಯೇ ಇತ್ತು ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಎರಡೂ ತಂಡಗಳ ಚಿತ್ರ ಗೆಲುವಿನತ್ತ ಇತ್ತು
ಐದನೇ ದಿನ ಮಳೆಯಾಗಮನವಾಗಿದೆ ಪಂದ್ಯ ಸ್ಥಗಿತಗೊಂಡಾಗ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ಗೆಲುವಿನತ್ತ ಗುರಿ ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಮಳೆ ಬಂದಾಗ ಯಾವುದೇ ತಂಡ ಕೂಡ ನಿಟ್ಟುಸಿರು ಬಿಡಲಿಲ್ಲ, ಇತ್ತ ಟೀಮ್ ಇಂಡಿಯಾ ಗುರಿಯನ್ನು ಬೆನ್ನಟ್ಟಿ ಮೊದಲ ಪಂದ್ಯವನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಅತ್ತ ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಯಿಂದ ಟೀಮ್ ಇಂಡಿಯಾವನ್ನು ಮಣಿಸುವ ಯೋಜನೆಯಲ್ಲಿತ್ತು ಎಂದು ಜಹೀರ್ ಖಾನ್ ಹೇಳಿದ್ದಾರೆ.