ಕೆಲವರನ್ನು ಸಹಿಸಿಕೊಳ್ಳು ಸಾಧ್ಯವಿಲ್ಲ
ಮೊಹಮದ್ ಕೈಫ್ ಲೈವ್ನಲ್ಲಿ ಕೇಳಿದ ಈ ಪ್ರಶ್ನೆಗೆ ಯುವಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕಾಮೆಂಟರಿ ಬಾಕ್ಸ್ನಲ್ಲಿರುವ ಕೆಲವರನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನೀವು ಎಲ್ಲಾ ರೀತುಯ ಜನರೊಂದಿಗೆ ಬೆರೆಯಬಲ್ಲಿರಿ, ಆದರೆ ಕಮೆಂಟರಿ ಬಾಕ್ಸ್ನಲ್ಲಿರುವ ಕೆಲವರನ್ನು ನಾನು ಸಹಿಸಿಕೊಳ್ಳು ಸಾಧ್ಯವಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ.
ಸಮಯ ಬಂದಾಗ ಕಾಮೆಂಟೇಟರ್ ಆಗುತ್ತೇನೆ
ಇದರ ಜೊತೆಗೆ ಯುವರಾಜ್ ಸಿಂಗ್ ನಾನು ವೀಕ್ಷಕವಿವರಣೆ ನೀಡುವ ಸಂದರ್ಭ ಬಂದಾಗ ಖಂಡಿತಾ ಮಾಡುತ್ತೇನೆ, ಐಸಿಸಿ ಕ್ರೀಡಾಕೂಟಗಳಿಗೆ ಕಾಮೆಂಟರಿ ನೀಡಬೇಕು ಎಂಬ ಮನಸಿದೆ. ಆದರೆ ಎಲ್ಲಾ ಸಂದರ್ಭದಲ್ಲೂ ನಾನು ಕಾಮೆಂಟರಿ ಹೇಳುತ್ತಿರಲು ಸಾಧ್ಯವಿಲ್ಲ, ನನಗೆ ಅಷ್ಟೊಂದು ತಾಳ್ಮೆಯೂ ಇಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಟೀಕಿಸುವುದು ಸರಿಯಲ್ಲ
ಕಾಮೆಂಟೇಟರ್ಗಳು ಮೈದಾನದಲ್ಲಿ ಆಡುತ್ತಿರುವ ಯುವ ಆಟಗಾರರನ್ನು ಟೀಕಿಸುವುದನ್ನು ಸರಿಯಲ್ಲ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿದ ಯುವರಾಜ್ ಸಿಂಗ್ ಮೈದಾನದಲ್ಲಿ ಆಟಗಾರ ಯಾವ ರೀತಿಯ ಒತ್ತಡದಲ್ಲಿರುತ್ತಾನೆ ಎಂಬುದು ನನಗೆ ತಿಳಿದಿದೆ ಎಂದು ಯುವರಾಜ್ ಸಿಂಹ್ ಹೇಳಿದ್ದಾರೆ.
ಕೋಚ್ ಆಗುವ ಇಂಗಿತ
ಆದರೆ ಯುವರಾಜ್ ಸಿಂಗ್ ಈ ಸಂದರ್ಭದಲ್ಲಿ ತಮ್ಮ ಬಯಕೆಯೊಂದನ್ನು ಹೇಳಿದ್ದಾರೆ. ಕೋಚ್ ಆಗಲು ನನಗೆ ಆಸೆಯಿದೆ ಎಂದು ಹೇಳಿದ ಅವರು, ಕಾಮೆಂಟರಿಗಿಂತ ನಾನು ಕೋಚ್ ಆಗಿರುವುದನ್ನು ಹೆಚ್ಚು ಅನುಭವಿಸುತ್ತೇನೆ ಎಂದು ಮೊಹಮದ್ ಕೈಫ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.