ಯಾರು ಆ ಆಟಗಾರ
ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಆ ಅಪ್ರತಿಮ ಛಲಗಾರನ ಹೆಸರೇ ಕಮಲ್ ಸಿಂಗ್. ಉತ್ತರಾಖಂಡ್ ರಣಜಿ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಮಹಾಮಾರಿಯ ವಿರುದ್ಧ ಹೋರಾಡಿ ಗೆದ್ದ ಕಮಲ್ ರಣಜಿ ಯ ಮೊದಲ ಪಂದ್ಯದಲ್ಲಿ ಭರ್ಜರಿ 101 ರನ್ ಗಳಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ಯುವರಾಜ್ ಸಿಂಗ್ ಹೋರಾಟವನ್ನು ನೆನಪಿಸಿದ್ದಾರೆ.
ಮೂರುವರೆ ವರ್ಷ ಕ್ಯಾನ್ಸರ್ ವಿರುದ್ಧ ಕಾದಾಟ
ಕಮಲ್ ಸಿಂಗ್ಗೆ ಸದ್ಯ ವಯಸ್ಸು ಕೇವಲ 18. ಆತನಿಗೆ ಹದಿನಾಲ್ಕೂವರೆ ವರ್ಷದವನಾಗಿದ್ದಾಗ ಆತನಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದು ಕೂಡ ಲುಕೇಮಿಯಾ. ಹೀಗಾಗಿ ಕ್ರಿಕೆಟರ್ ಆಗುವ ಕಮಲ್ ಕನಸಿಗೆ ದೊಡ್ಡ ಹೊಡೆತ ಬೀಳುತ್ತದೆ. ಸತತ ಮೂರೂವರೆವರ್ಷ ಚಿಕಿತ್ಸೆಗೆ ಒಳಗಾಗಿ ಒಳಗಾದರು. ಎದೆಗುಂದದ ಕಮಲ್ ಗೆದ್ದು ಬಂದಿದ್ದಾರೆ.
ಕ್ಯಾನ್ಸರ್ ವಿಷಯವನ್ನು ಮುಚ್ಚಿಟ್ಟಿದ್ದ ಪೋಷಕರು
ಕಮಲ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟರ್ ಆಗಬೇಕೆಂದು ಕನಸು ಕಂಡ ಹುಡುಗ. ಆದರೆ ಆಗಾಗ ಆರೋಗ್ಯದಲ್ಲಿ ದೊಡ್ಡ ಏರುಪೇರಾಗುತ್ತಿತ್ತು. ವೈದ್ಯಕೀಯ ಪರೀಕ್ಷೆಯಯಲ್ಲಿ ಕಮಲ್ ಸಿಂಗ್ಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮಗನಿಗೆ ತಿಳಿಸಿದೆ ಕ್ಯಾನ್ಸರ್ಗೆ ಚಿಕಿತ್ಸೆಯನ್ನು ನೀಡಲು ಮುಂದಾದರು. ಹೀಗಾಗಿ ಲುಕೇಮಿಯಾ ಇರುವ ವಿಚಾರ ಕಮಲ್ ಸಿಂಗ್ಗೆ ತಿಳಿದಿರಲೇ ಇಲ್ಲ.
ಸೆಕೆಂಡ್ ಸ್ಟೇಜ್ನಲ್ಲಿ ಪತ್ತೆ
ಕಮಲ್ಗೆ ಬ್ಲಡ್ ಕ್ಯಾನ್ಸರ್ ಇರುವ ವಿಚಾರ ಗೊತ್ತಾದಾಗ ಅದು ಎರಡನೇ ಹಂತದಲ್ಲಿತ್ತು. ವೈದ್ಯರು ಕಮಲ್ ಪೋಷಕರಿಗೆ ಅಭಯವನ್ನು ನೀಡಿದರು. ಇನ್ನೂ ಚಿಕ್ಕ ವಯಸ್ಸಾಗಿರುವುದರಿಂದ ಕಮಲ್ ಶೀಘ್ರ ಗುಣಮುಖರಾಗುತ್ತಾರೆ ಎಂಬ ಭರವಸೆ ನೀಡಿದರು. ವೈದ್ಯರ ನಿರೀಕ್ಷೆಗೂ ಮೀರಿ ಕಮಲ್ ಚೇತರಿಸಿಕೊಂಡಿದ್ದಾರೆ.
ಯುವಿಗೂ ಕಮಲ್ಗೂ ಸಾಮ್ಯತೆ
ಕ್ಯಾನ್ಸರ್ ವಿರುದ್ಧ ಹೋರಾಡಿದ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ಗೂ ಕಮಲ್ಗೂ ಸಾಕಷ್ಟು ಸಾಮ್ಯತೆಗಳು ಕಂಡುಬರುತ್ತದೆ. ಯುವರಾಜ್ ಸಿಂಗ್ರಂತೆಯೇ ಕಮಲ್ ಕೂಡ ಎಡಗೈ ಆಟಗಾರ. ಸ್ಪೋಟಕವಾಗಿ ಆಡಬಲ್ಲ ಸಾಮರ್ಥ್ಯವನ್ನು ಕಮಲ್ ಹೊಂದಿದ್ದಾರೆ.
ಕನ್ನಡಿಗ ಗಿರೀಶ್ ಹೋರಾಟವೂ ಸ್ಪೂರ್ತಿ
ಕ್ಯಾನ್ಸರ್ ಹೋರಾಟದಲ್ಲಿ ಗೆದ್ದ ಮತ್ತೊಬ್ಬ ಕ್ರೀಡಾಪಟುವೂ ಇಲ್ಲಿ ಸ್ಪೂರ್ತಿ ನೀಡುತ್ತಾರೆ. ಅದು ಬೇರೆ ಯಾರೂ ಅಲ್ಲ, ಕಿಕ್ ಬಾಕ್ಸರ್ ಕನ್ನಡಿಗ ಗಿರೀಶ್ ಗೌಡ. ಇದೇ ರೀತಿ ಕ್ಯಾನ್ಸರ್ ವಿರುದ್ಧ ಹೋರಾಟವನ್ನು ಮಾಡಿದ ಗೆದ್ದ ಬಂದ ಕ್ರೀಡಾ ಪಡು ಗಿರೀಶ್. ಕ್ಯಾನ್ಸರ್ ವಿರುದ್ಧ ಗೆದ್ದು ಬಳಿಕ 201-19ನೇ ಸಾಲಿನ ನ್ಯಾಶನಲ್ ಫೆಡರೇಶನ್ ಕಪ್ ಗೆದ್ದು ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.