ನಿಷೇಧ ಶಿಕ್ಷೆ ಕಡಿತ
2018ರಲ್ಲಿ ಕೇರಳ ಹೈ ಕೋರ್ಟ್ ಕೂಡ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಬಿಸಿಸಿಐಗೆ ಹೇಳಿತ್ತು. ಮತ್ತೆ 2019ರಲ್ಲಿ ಸುಪ್ರೀಮ್ ಕೋರ್ಟ್ ಶ್ರೀಶಾಂತ್ ತಪ್ಪನ್ನು ಎತ್ತಿ ಹಿಡಿಯಿತು. ಆದರೆ ಆಜೀವ ನಿಷೇಧವನ್ನು ಶಿಕ್ಷೆಯನ್ನು ಕಡಿತಗೊಳಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. ಹೀಗಾಗಿ ಬಿಸಿಸಿಐಯು ನಿಷೇಧವನ್ನು 7 ವರ್ಷಕ್ಕೆ ಕಡಿತಗೊಳಿಸಿತ್ತು.
'ಚಂಡಮಾರುತದಂತೆ ಮರಳುತ್ತೇನೆ'
'ನನಗೆ ಅವಕಾಶ ನೀಡುತ್ತಿರುವುದಕ್ಕೆ ನಾನು ಕೆಸಿಎಗೆ ಚಿರಋಣಿಯಾಗಿದ್ದೇನೆ. ನಾನು ನನ್ನ ಫಿಟ್ನೆಸ್ ಅನ್ನು ಸಾಬೀತುಪಡಿಸುತ್ತೇನೆ. ಚಂಡಮಾರುತದಂತೆ ಕ್ರಿಕೆಟ್ ಅಂಗಳಕ್ಕೆ ಮರಳುತ್ತೇನೆ. ಎಲ್ಲಾ ವಿವಾದಗಳಿಗೂ ತೆರೆ ಎಳೆಯಬೇಕಾದ ಸಮಯವಿದು,' ಎಂದು ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಶಾಂತ್ ಖುಷಿ ಹಂಚಿಕೊಂಡಿದ್ದಾರೆ.
ಶ್ರೀಶಾಂತ್ ಕಮ್ಬ್ಯಾಕ್ ಸಂಪತ್ತೆನಿಸಲಿದೆ
ಕೆಸಿಎಯು ಇತ್ತೀಚೆಗೆ ಮಾಜಿ ವೇಗಿ ಟಿನು ಯೋಹಾನನ್ ಅವರನ್ನು ತಂಡದ ಕೋಚ್ ಆಗಿ ಆರಿಸಿತ್ತು. ಕೆಸಿಎ ಕಾರ್ಯದರ್ಶಿ ಶ್ರೀತ್ ನಾಯರ್ ಕೂಡ ಶ್ರೀಶಾಂತ್ ಕಮ್ಬ್ಯಾಕ್ ರಾಜ್ಯ ತಂಡಕ್ಕೆ ಸಂಪತ್ತಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದರರ್ಥ ನಿಷೇಧದ ಬಳಿಕ ಶ್ರೀಶಾಂತ್ ರಣಜಿಯಲ್ಲಿ ಕೇರಳ ಪರ ಆಡೋದು ಬಹುತೇಕ ಖಚಿತವಾಗಿದೆ.
ಶ್ರೀಶಾಂತ್ ಆಸೆಗೆ ಬಲ
ಭಾರತ ತಂಡದ ಪರ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್ಗಳು ಮತ್ತು 10 ಟಿ20ಐ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ತನ್ನ ಮೇಲಿದ್ದ ನಿಷೇಧ ಶಿಕ್ಷೆ ಕಡಿಮೆಗೊಳಿಸಿ ಕೋರ್ಟ್ ತೀರ್ಪು ನೀಡಿದಾಗಲೇ ಶ್ರೀಶಾಂತ್ ತನಗೆ ಇನ್ನೊಂದಿಷ್ಟು ಕಾಲ ಕ್ರಿಕೆಟ್ ಆಡುವ ಆಸೆಯಿದೆ ಎಂದಿದ್ದರು. ಶ್ರೀಶಾಂತ್ ಆಸೆಗೆ ಈಗ ಪುಷ್ಟಿ ಬಂದಂತಾಗಿದೆ.