ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಕೋವಿಡ್-19 ಸೋಂಕಿತರ ನೆರವಿಗೆ ನಿಂತಿದ್ದಾರೆ. ಕೊರೊನಾ ವೈರಸ್ ಸೋಂಕಿತರಿಗಾಗಿ ಆಮ್ಲಜನಕ ಸಾಂದ್ರಕಗಳ ಸಂಗ್ರಹಣೆಗೆ ತೆಂಡೂಲ್ಕರ್ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆಗಾಗಿ ತುಡಿದಿದ್ದಾರೆ.
ಕೊಹ್ಲಿ ಬಗ್ಗೆ 5 ವರ್ಷಗಳ ಹಿಂದೆ ಧೋನಿ ವ್ಯಕ್ತಪಡಿಸಿದ್ದ ಸಂಶಯವನ್ನು ಹಂಚಿಕೊಂಡ ಪೀಟರ್ಸನ್
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನಕ್ಕೆ ಹತ್ತಿರ 4 ಲಕ್ಷದಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ನೀಡುವ ಆಮ್ಲಜನಕ ಸಿಲಿಂಡರ್ಗಳ ಕೊರತೆ ಎದುರಾಗುತ್ತಿದೆ.
ಹೀಗಾಗಿಯೇ ಕ್ರೀಡಾ ಕ್ಷೇತ್ರಗಳ ಅನೇಕರು ಕೋವಿಡ್-ಪರಿಹಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಬೌಲಿಂಗ್ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಕೂಡ 50,000 ಡಾಲರ್ ಹಣವನ್ನು ಪಿಎಂ ಕೇರ್ಸ್ಗೆ ದೇಣಿಗೆ ನೀಡಿದ್ದರು.
ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಆ್ಯಡಂ ಜಂಪಾ
'ಅಗತ್ಯವಿರುವ ಈ ಸಮಯದಲ್ಲಿ ರಾಷ್ಟ್ರದಾದ್ಯಂತದ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ಸಚಿನ್ ಅವರು 'ಮಿಷನ್ ಆಕ್ಸಿಜನ್'ಗೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಅವರ ನಡೆ ಹೃದಯ ಸ್ಪರ್ಶಿಸಿದೆ,' ಎಂದು ಮಿಷನ್ ಆಕ್ಸಿಜನ್ ಹೇಳಿದೆ.