ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳಿಗೆ ಗಾಬರಿ ಬೇಡ ಕ್ರಿಕೆಟಿಗ ಸುರೇಶ್ ರೈನಾಗೆ ಏನೂ ಆಗಿಲ್ಲ

ಬೇಸರಗೊಂಡ ಸುರೇಶ್ ರೈನಾ..? | Oneindia Kannada
Cricketer Suresh Raina clarifies about accident news

ಬೆಂಗಳೂರು, ಫೆಬ್ರವರಿ 12: ಕೆಲವು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರಿಗೆ ಕಾರು ಅಪಘಾತವಾಗಿದೆ ಅವರಿಗೆ ತೀವ್ರ ಗಾಯಗಳಾಗಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ವತಃ ರೈನಾ ಇಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ ಜಾಹೀರಾತಿಗೆ ಹೇಡನ್ ಕೆಂಗಣ್ಣು, ವೀರೂಗೂ ಛಾಟಿ ಸ್ಟಾರ್ ಸ್ಪೋರ್ಟ್ಸ್‌ ಜಾಹೀರಾತಿಗೆ ಹೇಡನ್ ಕೆಂಗಣ್ಣು, ವೀರೂಗೂ ಛಾಟಿ

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕ್ರಿಕೆಟಿಗ ರೈನಾ, ನನಗೆ ಕಾರು ಅಪಘಾತ ಆಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಅದು ಸಂಪೂರ್ಣ ಸುಳ್ಳು ಎಂದಿದ್ದಾರೆ.

ದೇವರ ದಯದಿಂದ ನನಗೇನೂ ಆಗಿಲ್ಲ, ಆರಾಮವಾಗಿದ್ದೇನೆ, ಆದರೆ ಸುಳ್ಳು ಸುದ್ದಿ ಹರಡಿಸಿದ್ದ ಯೂಟ್ಯೂಬ್ ಚಾನೆಲ್‌ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ಮಾಡಲಾಗಿದೆ, ಈ ಸುದ್ದಿಗಳಿಂದ ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಬೇಸರವಾಗಿದೆ ಎಂದು ರೈನಾ ಹೇಳಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಗೆ ವಿಶ್ರಾಂತಿ, ರಾಹುಲ್, ರಹಾನೆ ಇನ್?ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಗೆ ವಿಶ್ರಾಂತಿ, ರಾಹುಲ್, ರಹಾನೆ ಇನ್?

ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೆಲವು ಚಿತ್ರಗಳನ್ನು ತೋರಿಸಿ ರೈನಾ ಅವರ ಕಾರು ಅಪಘಾತವಾಗಿ ಅವರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿ ಮಾಡಿದ್ದವು, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಅಂತೂ ರೈನಾ ಅವರು ಮರಣಹೊಂದಿದ್ದಾರೆ ಎಂದು ಸಹ ಸುದ್ದಿ ಹರಿಬಿಡಲಾಗಿತ್ತು.

Story first published: Tuesday, February 12, 2019, 21:02 [IST]
Other articles published on Feb 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X