ಮುಂಬೈ: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಪಂಜಾಬಿ ಗಾಯಕ, ಗೀತೆ ರಚನೆಕಾರ ಗುರು ರಾಂಧವ ಬಂಧನಕ್ಕೊಳಗಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಸಮೀಪ ಮುಂಬೈ ಡ್ರ್ಯಾಗನ್ ಫ್ಲೈ ಕ್ಲಬ್ ಸಮೀಪ ಇಬ್ಬರನ್ನೂ ಪೊಲೀಸರು ಬಂಧಿಸಿ, ಬಳಿಕ ಬೇಲ್ನ ಮೇಲೆ ಬಿಡುಗಡೆ ಮಾಡಿದ್ದಾರೆ.
ದ್ವಿತೀಯ ಟೆಸ್ಟ್ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!
ಮುಂಬೈ ಡ್ರ್ಯಾಗನ್ಫ್ಲೈಯ ಮೇಲಿನ ದಾಳಿಯ ವೇಳೆ ಮುಂಬೈ ಕ್ಲಬ್ನ ಏಳು ಸಿಬ್ಬಂದಿ ಸೇರಿ ಸುಮಾರು 34 ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್-19 ನಿಯಮ ಉಲ್ಲಂಘಿಸಿದ್ದಾಗಿ ಪೊಲೀಸರು ಕ್ಲಬ್ನಲ್ಲಿದ್ದವರನ್ನು ಬಂಧಿಸಿದ್ದಾಗಿ ಹೇಳಲಾಗಿದೆ.
ಕೊರೊನಾವೈರಸ್ ನಿಯಮ ಮೀರಿದ್ದಕ್ಕಾಗಿ ಬಂಧನಕ್ಕೊಳಗಾದವರಲ್ಲಿ ಗಾಯಕ ಗುರು ರಾಂಧವ ಮತ್ತು ಭಾರತದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಕೂಡ ಸೇರಿದ್ದಾರೆ ಎಂದು ಸಹರ್ ಪೊಲೀಸ್ ಸ್ಟೇಷನ್ನ ಅಧಿಕಾರಿ ತಿಳಿಸಿದ್ದಾರೆ.
2020ರ ಐಪಿಎಲ್ನ ಪ್ರಮುಖ ಸಂಗತಿಗಳು, ಇಣುಕು ನೋಟಗಳು
ಭಾರತದ ಪ್ರಮುಖ ಆಲ್ ರೌಂಡರ್ ಆಗಿದ್ದ ರೈನಾ ಕಳೆದ ಆಗಸ್ಟ್ 15ರಂದು ಎಂಎಸ್ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾಗ ತಾನೂ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಐಪಿಎಲ್ನಲ್ಲಿ ರೈನಾ ಆಡುವುದನ್ನು ನಿರೀಕ್ಷಿಸಲಾಗಿತ್ತಾದರೂ ವೈಯಕ್ತಿಕ ಕಾರಣದಿಂದ ರೈನಾ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡಿರಲಿಲ್ಲ.