ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆಯಿಂದ ಕೇದಾರ್ ಜಾಧವ್, ಪೀಯೂಷ್ ಚಾವ್ಲಾ, ಮುರಳಿ ವಿಜಯ್ ಹೊರಕ್ಕೆ?

CSK has released Kedar Jadhav, Piyush Chawla and Murali Vijay ahead of IPL 2021

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನತ್ತ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯಲಿದೆ. ಬುಧವಾರ (ಜನವರಿ 20) ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿವೆ.

'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!

ಫ್ರಾಂಚೈಸಿಗಳು ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸುವುದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಫ್ರಾಂಚೈಸಿ ಕೇದಾರ್ ಜಾಧವ್, ಪೀಯೂಷ್ ಚಾವ್ಲಾ ಮತ್ತು ಮುರಳಿ ವಿಜಯ್ ಅವರನ್ನು ಬಿಟ್ಟುಕೊಡಲಿದೆ ಎಂದು ವರದಿಯೊಂದು ಹೇಳಿದೆ.

ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿಯ ಪ್ರಕಾರ, 2021ರ ಐಪಿಎಲ್‌ನಿಂದ ಸಿಎಸ್‌ಕೆ ಫ್ರಾಂಚೈಸಿ ಆಲ್ ರೌಂಡರ್ ಜಾಧವ್, ಸ್ಪಿನ್ನರ್ ಚಾವ್ಲಾ, ಬ್ಯಾಟ್ಸ್‌ಮನ್‌ ಮುರಳಿ ವಿಜಯ್ ಅವರನ್ನು ಬಿಟ್ಟುಕೊಡಲಿದೆ ಎನ್ನಲಾಗಿದೆ. ಕಳೆದ ಸೀಸನ್‌ನಲ್ಲಿ ಈ ಮೂವರೂ ಆಟಗಾರರು ಕಾಡಿದ್ದೇ ಕಡಿಮೆ, ಆಡಿದರಲ್ಲೂ ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ.

IPL 2021 players retention Live Updates: ಉಳಿಸಿಕೊಳ್ಳುವವರ ಪಟ್ಟಿIPL 2021 players retention Live Updates: ಉಳಿಸಿಕೊಳ್ಳುವವರ ಪಟ್ಟಿ

ಸುರೇಶ್ ರೈನಾ ಅವರನ್ನು ಸಿಎಸ್‌ಕೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಈಗಾಗಲೇ ಚೆನ್ನೈಯೊಂದಿಗಿನ ಒಪ್ಪಂದ ಕೊನೆಯೊಂಡಿರುವುದನ್ನು ಟ್ವೀಟ್‌ ಮೂಲಕ ಖಾತರಿಪಡಿಸಿದ್ದಾರೆ. ಮಾಹಿತಿ ಪ್ರಕಾರ ಎಂಎಸ್ ಧೋನಿಯೇ 2021ರ ಐಪಿಎಲ್‌ಗೂ ಸಿಎಸ್‌ಕೆ ನಾಯಕರಾಗಿರಲಿದ್ದಾರೆ.

Story first published: Wednesday, January 20, 2021, 17:05 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X