ಕ್ರಿಕೆಟ್ ಪ್ರೋತ್ಸಾಹಕ್ಕೆ ಬದ್ಧ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಕಾರ್ಯದರ್ಶಿ ಸುಧಾಕರ್ ಆರ್. ರಾವ್ ಮಾತನಾಡಿ, 'ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹ ನೀಡಲು ಸಂಸ್ಥೆಯು ಬದ್ಧವಾಗಿದೆ. ಕೆಪಿಎಲ್ ಎಂಟನೇ ಅವೃತ್ತಿಯ ಟೂರ್ನಿಯ ಪಂದ್ಯಗಳು ಮೈಸೂರಿನಲ್ಲಿ ಆಯೋಜನೆಯಾಗಿರುವುದು ಸಂತಸದ ವಿಷಯ. ಪ್ರಮುಖ ಟೂರ್ನಿ ಆಯೋಜಿಸಲು ಬೇಕಾದ ಎಲ್ಲ ಸೌಕರ್ಯಗಳೂ ಮೈಸೂರಿನಲ್ಲಿವೆ,' ಎಂದರು ಕೆಪಿಎಲ್ ಟೂರ್ನಿ ಆರಂಭಿಸಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಕಾರಣಕರ್ತರು ಎಂಬುದನ್ನು ನೆನಪಿಸಿಕೊಂಡರು.
ಸ್ವಂತ ಕ್ರೀಡಾಂಗಣ
ಮೈಸೂರಿನಲ್ಲಿ ಸ್ವಂತ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ದೊರಕಿಸಿಕೊಡಲು ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಸಂಸ್ಥೆಯು ಶೀಘ್ರದಲ್ಲೇ ಮೈಸೂರಿನಲ್ಲಿ ಸ್ವಂತ ಕ್ರೀಡಾಂಗಣ ಹೊಂದಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ಗಳು ಲಭ್ಯ
ಕೆಪಿಎಲ್ ಟೂರ್ನಿಯ ಪ್ರಚಾರ ರಾಯಭಾರಿ, ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೈಸೂರಿನಲ್ಲಿ ನಡೆಯಲಿರುವ ಕೆಪಿಎಲ್ ಪಂದ್ಯಗಳ ಟಿಕೆಟ್ಗಳಿಗೆ 75 ರೂ., 100 ರೂ. ಮತ್ತು 300 ರೂ. ಬೆಲೆ ನಿಗದಿಪಡಿಸಲಾಗಿದೆ. ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದ ಕೌಂಟರ್ನಲ್ಲಿ ಟಿಕೆಟ್ಗಳು ಲಭ್ಯವಿವೆ. ಆನ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು ಎಂದು ಕೆಎಸ್ಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ರಸ್ಥಾನದಲ್ಲಿ ಬಳ್ಳಾರಿ
ಬೆಂಗಳೂರು ಲೆಗ್ನ ಒಟ್ಟು 15 ಲೀಗ್ ಪಂದ್ಯಗಳು ಮುಕ್ತಾಯಗೊಂಡಿವೆ. ಸದ್ಯ ಕೆಪಿಎಲ್ ಅಂಕಪಟ್ಟಿಯಲ್ಲಿ 5ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಬಳ್ಳಾರಿ ಟಸ್ಕರ್ಸ್ ಅಗ್ರ ಸ್ಥಾನದಲ್ಲಿದೆ. ಶಿವಮೊಗ್ಗ ಲಯನ್ಸ್, ಹುಬ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಬೆಳಗಾವಿ ಪ್ಯಾಂಥರ್ಸ್ ಅನಂತರದ ಸ್ಥಾನಗಳಲ್ಲಿವೆ.