ಹಿಂದು ಧರ್ಮ ಎಂಬ ಕಾರಣಕ್ಕೆ ದಾನೀಶ್ ಕನೇರಿಯಾ ಅವರನ್ನು ಪಾಕಿಸ್ತಾನ ತಂಡದಲ್ಲಿ ಕೆಲ ಆಟಗಾರರು ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದರು. ಶೋಯೆಬ್ ಅಖ್ತರ್ ನೀಡಿದ ಈ ಹೇಳಿಕೆಗೆ ಸ್ವತಃ ದಾನಿಶ್ ಕನೇರಿಯಾ ಕೂಡ ಧ್ವನಿಗೂಡಿಸಿದ್ದರು. ಈ ಸುದ್ದಿ ಇದೀಗ ಭಾರತದಲ್ಲಿ ಭಾರೀ ಸದ್ದು ಮಾಡ್ತಿದೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ದಾನೀಶ್ ಕನೆರಿಯಾ ಅವರ ಪ್ರಕರಣ ಪಾಕಿಸ್ಥಾನದ ನೈಜ ಮುಖವನ್ನು ತೋರಿಸುತ್ತದೆ ಎಂದು ಹೇಳಿಕೆಯನ್ನು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.
ಹಿಂದು ಎಂಬ ಕಾರಣಕ್ಕೆ ದಾನಿಶ್ ಕನೇರಿಯಾ ತಾರತಮ್ಯಕ್ಕೆ ಒಳಗಾಗಿದ್ದರು; ಶೋಯೆಬ್ ಅಖ್ತರ್
ಟೀ್ ಇಂಡಿಯಾ ಸುಧೀರ್ಘ ಅವಧಿಗೆ ಅಜರುದ್ಧೀನ್ ಅವರ ನಾಯಕತ್ವದಲ್ಲಿ ಆಡಿದೆ. ಆದರೆ ಭಾರತದಲ್ಲಿ ಇಂತಾ ಸ್ಥಿತಿಯಿರಲಿಲ್ಲ. ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಅವರೇ ಪ್ರದಾನಿಯಾಗಿರುವ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಅಸಮಾದಾನವನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗಂಭೀರ್ ವ್ಯಕ್ತಪಡಿಸಿದ್ದಾರೆ.
ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್
55-60 ಟೆಸ್ಟ್ ಪಂದ್ಯಗಳನ್ನು ದಾನೀಶ್ ಕನೇರಿಯಾ ಅವರು ಪಾಕಿಸ್ತಾನಕ್ಕಾಗಿ ಆಡಿದ್ದಾರೆ. ಆದರೆ ಆಷ್ಟಾಗಿಯೂ ಈ ರೀತಿಯ ಹಿಂಸೆಯನ್ನು ನೀಡಿರೋದು ನಾಚಿಕೆಗೇಡು ಎಂದು ಗಂಭೀರ್ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕಿಸ್ತಾನದ ಟಿವಿ ಸಂದರ್ಶನದಲ್ಲಿ ದಾನೀಶ್ ಕನೇರಿಯಾ ಅವರು ಅನುಭವಿಸಿದ ಸಂಕಷ್ಠಗಳ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು.