ಸಹಜ ಆಟವಾಡಲು ಹೇಳಿದ್ದೆ
ಪಂದ್ಯದ ಫಲಿತಾಂಶದ ನಂತರ ನಾಯಕ ರಿಷಭ್ ಪಂತ್ ಪೃಥ್ವಿ ಶಾ ಜೊತೆಗೆ ನಡೆಸಿದ ಸಂಭಾಷಣೆಯ ಬಗ್ಗೆ ಮಾತನಾಡಿದರು. ತಾನು ಪೃಥ್ವಿ ಶಾಗೆ ಆತನ ಸಹಜವಾದ ಆಟವನ್ನು ಆಡಲಷ್ಟೇ ಹೇಳಿದ್ದೆ. ಇಂತಾ ಪಂದ್ಯಗಳಲ್ಲಿ ನಾವು ರನ್ರೇಟ್ ಬಗ್ಗೆ ಯೋಚಿಸಲು ಶಕ್ತರಾಗುತ್ತೇವೆ" ಎಂದು ಪಂತ್ ಹೇಳಿದ್ದಾರೆ.
ಪೃಥ್ವಿ ಶಾಗೆ ಆತ್ಮವಿಶ್ವಾಸ ತುಂಬಿದರೆ ಸಾಕು
"ಯುವ ಆಟಗಾರರಿಗೆ ನಿಮ್ಮ ಆಟವನ್ನು ನೀವು ಆನಂದಿಸುತ್ತಾ ಸಾಗಿ ಎಂದಷ್ಟೇ ಹೇಳಬಹುದು. ಪೃಥ್ವಿ ಶಾಗೆ ಕೇವಲ ಆತ್ಮ ವಿಶ್ವಾಸವನ್ನು ತುಂಬಿದರೆ ಸಾಕು. ಆತ ನಿಜಕ್ಕೂ ಅದ್ಭುತಗಳನ್ನೇ ಸೃಷ್ಟಿಸಬಲ್ಲಂತಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದಕ್ಕೆ ಕೆಕೆಆರ್ ವಿರುದ್ಧ ಶಾ ನೀಡಿದ ಪ್ರದರ್ಶನ ಸಾಕ್ಷಿ" ಎಂದು ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಎರಡನೇ ಸ್ಥಾನಕ್ಕೇರಿದ ಡೆಲ್ಲಿ
ಕೆಕೆಆರ್ ವಿರುದ್ಧದ ಈ ಗೆಲುವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲೊ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೆ.