ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಾಣುವ ಮೂಲಕ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂಜಿಲೆಂಡ್ ತಂಡ ಎಲ್ಲಾ ವಿಭಾಗದಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮಧ್ಯೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ದಿನವೂ ಸಾಕಷ್ಟು ಏರಿಳಿತಗಳು ಸಂಭವಿಸುತ್ತಿತ್ತು. ಹೀಗೆಯೇ ನಡೆಯುತ್ತದೆ ಎಂಬುದನ್ನು ನಿರೀಕ್ಷಿಸುವುದು ಕಠಿಣವಾಗಿತ್ತು. ಹಾಗಾಗಿ ಅವಕಾಶಗಳಿಗಾಗಿ ನಾವು ಕಾಯುತ್ತಿದ್ದೆವು. ನಾವು ಆರಂಭಿಕ ವಿಕೆಟ್ಗಳನ್ನು ಆದಷ್ಟು ಬೇಗನೆ ಪಡೆಯಲು ಪ್ರಯತ್ನಿಸಿದ್ದೆವು. ಆ ಮೂಲಕ ಹೆಚ್ಚಿನ ಅವಕಾಶಗಳು ಪಡೆಯಲು ಸಾಧ್ಯವಾಗುತ್ತಿತ್ತು" ಎಂದಿದ್ದಾರೆ.
ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!
"ಅಂತಿಮ ದಿನದಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಶೀಘ್ರವಾಗಿ ಪಡೆಯಲು ನಮ್ಮಿಂದ ಸಾಧ್ಯವಾಯಿತು. ಇಲ್ಲವಾದಲ್ಲಿ ಭಾರತಕ್ಕೆ ಪಂದ್ಯವನ್ನು ಗೆಲ್ಲಲು ಸಮಾನ ಅವಕಾಶವಿತ್ತು. ಪಿಚ್ನ ಮೇಲ್ಮೈ ಭಾರತಕ್ಕೂ ಕೂಡ ಉತ್ತಮ ಅವಕಾಶ ನೀಡುವ ಸಾಧ್ಯತೆಯಿತ್ತು. ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಕಾರಣ ಮುಂದೆ ನಮಗೂ ಇದು ಕಠಿಣವಾಗಿರುತ್ತಿತ್ತು" ಎಂದು ಕೇನ್ ವಿಲಿಯಮ್ಸನ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗಾಗಿ ಉತ್ತಮ ಸಿದ್ಧತೆಯನ್ನು ಮಾಡಿಕೊಂಡಿತ್ತು ಎಂದು ಭಾವಿಸುವುದಿಲ್ಲ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಯಿಂದ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಹೆಚ್ಚಿನ ಅನುಕೂಲಗಳು ಆಗಿವೆ ಎಂದು ಭಾವಿಸುವುದಿಲ್ಲ ಎಂದಿದ್ದಾರೆ. ಭಾರತ ಒಂದು ಕಠಿಣ ಸ್ಪರ್ಧೆಯನ್ನು ನೀಡುವ ತಂಡವಾಗಿದ್ದು ಫೈನಲ್ ಪಮದ್ಯವನ್ನು ಗೆಲ್ಲಲು ಕಿವೀಸ್ ತಂಡಕ್ಕೆ ಸಾಕಷ್ಟು ಕಠಿಣ ಸವಾಲೊಡ್ಡಿತ್ತು ಎಂದಿದ್ದಾರೆ.
'ಗ್ರೇಟ್ವಾಲ್-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!
"ಉತ್ತಮ ಸಿದ್ಧತೆ ಎಂದರೆ ಏನು ಎಂಬುದು ತಿಳಿದುಕೊಳ್ಳುವುದು ತುಂಬಾ ಕಷ್ಟ. ಭಾರತ ತಂಡ ನಾವು ಭಾವಿಸಿದಂತೆಯೇ ಅತ್ಯಂತ ಬಲಿಷ್ಠ ತಂಡ ಹಾಗೂ ವಿಶ್ವ ದರ್ಜೆಯ ತಂಡವಾಗಿದೆ. WTC ಫೈನಲ್ಗೂ ಮುನ್ನ ಇಂಗ್ಲೆಂಡ್ಗೆ ಪ್ರವಾಸ ನಿಗದಿಯಾಗಿದ್ದಿದ್ದು ನಿಜಕ್ಕೂ ಕಾಕತಾಳೀಯವಾಗಿತ್ತು" ಎಂದು ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟಿದ್ದಾರೆ.