ಕ್ರೀಸ್ ಗೆ ಮೊದಲು ಬಂದಿದ್ದು ಧೋನಿ
ಆದರೆ ಯುವರಾಜ್ ಸಿಂಗ್ಗೆ ಮುಂಚಿತವಾಗಿ ಕ್ರೀಸ್ ಗೆ ಹೋಗುವಂತೆ ಧೋನಿಗೆ ಸಲಹೆ ನೀಡಿದ್ದು, ಸಚಿನ್ ಅಂತೆ. ಹೌದು, ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಫೈನಲ್ನಲ್ಲಿ ಸೆಹ್ವಾಗ್ ಹಾಗೂ ಸಚಿನ್ ಇಬ್ಬರೂ ಔಟಾಗಿ ಪೆವಿಲಿಯನ್ ಸೇರಿದ್ದಾಗ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಆಡುತ್ತಿದ್ದರು. ಆಗ ಧೋನಿಗೆ ಸಲಹೆ ನೀಡಿದ ಸಚಿನ್, ಎಡಗೈ ಬ್ಯಾಟ್ಸ್ಮನ್ ಔಟಾದರೆ ಯುವರಾಜ್ ಸಿಂಗ್ ಆಡಲು ಹೋಗಲಿ, ಬಲಗೈ ಆಟಗಾರ ಔಟಾದರೆ ನೀನು ಹೋಗು ಎಂದು ಸಲಹೆ ನೀಡಿದ್ದರಂತೆ.
ಬಲಗೈ ಬ್ಯಾಟ್ಸ್ಮನ್ ಕ್ರೀಸ್ಗೆ ಹೋಗಲಿ
ಸಚಿನ್ ಸಲಹೆ ನೀಡಿದ ಕೆಲ ಸಮಯದ ನಂತರ ವಿರಾಟ್ ಔಟಾಗಿದ್ದಾರೆ. ಸಚಿನ್ ಸಲಹೆಯಂತೆ ಧೋನಿ ಪ್ಯಾಡು ಕಟ್ಟಿಕೊಂಡು ಯುವರಾಜ್ಗಿಂತಲೂ ಮೊದಲು ಕ್ರೀಸ್ ಗೆ ತೆರಳಿ ಅಜೇಯ 91 ಗಳಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಈ ವಿಷಯವನ್ನು ಸೆಹ್ವಾಗ್ ಅವರು 'ವಾಟ್ ದಿ ಡಕ್' ಟಾಕ್ ಶೋನಲ್ಲಿ ಹೇಳಿಕೊಂಡಿದ್ದಾರೆ.
ಧೋನಿಗೆ ನಾಯಕತ್ವ ಕೊಡಿಸಿದ್ದೂ ಸಚಿನ್
ಧೋನಿಗೆ ಟಿ20 ವಿಶ್ವಕಪ್ನ ನಾಯಕತ್ವ ನೀಡುವಲ್ಲಿಯೂ ಸಚಿನ್ ಅವರ ಪಾತ್ರ ಇದೆ ಎಂದು ಈ ಮೊದಲೇ ತಿಳಿದಿದೆ. ಮೊದಲ ಟಿ20 ವಿಶ್ವಕಪ್ ಫೈನಲ್ಗೆ ಹಿರಿಯರಾದ ಸಚಿನ್, ದ್ರಾವಿಡ್, ಸೆಹ್ವಾಗ್ ಇತರ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಆಗ ಬಿಸಿಸಿಐಗೆ ಸಲಹೆ ನೀಡಿ ಧೋನಿಗೆ ಟಿ20 ವಿಶ್ವಕಪ್ ತಂಡಕ್ಕೆ ನಾಯಕನನ್ನಾಗಿ ಮಾಡಲಾಯಿತು.
ಕ್ರಿಕೆಟ್ ಇತಿಹಾಸದಲ್ಲಿ ಧೋನಿ ಹೆಸರು
ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಚಿನ್ ಸೆಹ್ವಾಗ್ ಬೇಗನೆ ಔಟಾಗಿದ್ದರು. ಆ ನಂತರ ಗಂಭೀರ್ ಹಾಗೂ ಕೊಹ್ಲಿ ಕೆಲ ಕಾಲ ಉತ್ತಮ ಪಾಲುದಾರಿಕೆ ಆಟ ಆಡಿದರು ಆ ನಂತರ ಕೊಹ್ಲಿ ಔಟಾದರು ಆಗ ಸ್ಕ್ರೀಜಿಗೆ ಹೋದ ಧೋನಿ ಅಜೇಯ 91 ರನ್ ಗಳಿಸಿ ಪಂದ್ಯ ಗೆದ್ದುಕೊಟ್ಟರು. ಅಂದು ಅವರು ಹೊಡೆ ಕೊನೆಯ ಸಿಕ್ಸ್ ಕ್ರಿಕೆಟ್ ಇತಿಹಾಸದಲ್ಲಿ ಸೇರಿಹೋಯಿತು.