2 ಓವರ್ಗೆ 34 ರನ್
ಬಾಂಗ್ಲಾ ನೀಡಿದ್ದ 167 ರನ್ ಗುರಿ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕದ (56) ನೆರವಿನೊಂದಿಗೆ 18 ಓವರ್ಗೆ 5 ವಿಕೆಟ್ ಕಳೆದು 133 ರನ್ ಗಳಿಸಿತ್ತು. ಅಂತಿಮ ಎರಡು ಓವರ್ನಲ್ಲಿ ಭಾರತ ಗೆಲ್ಲಲು 34 ರನ್ಗಳ ಅಗತ್ಯವಿತ್ತು.
ಗೆಲುವಿನ ಪಣ ತೊಟ್ಟ ಕಾರ್ತಿಕ್
6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಎತ್ತಿಕೊಂಡಾಗ ಕ್ರೀಸ್ನಲ್ಲಿ ವಿಜಯ್ ಶಂಕರ್ ಇದ್ದರು. ದಿನೇಶ್ ಆವತ್ತು ಕೇವಲ 7 ಎಸೆತಗಳಿಗೆ 23 ರನ್ ಚಚ್ಚಿದ್ದರು. 19.5ನೇ ಓವರ್ನಲ್ಲಿ ವಿಜಯ್ ಶಂಕರ್ ಓಟಾದರು. ಪಂದ್ಯ ತೀವ್ರ ರೋಚಕ ಹಂತಕ್ಕೆ ತಿರುಗಿತ್ತು. ಸೌಮ್ಯ ಸರ್ಕಾರ್ ಅವರ ಕೊನೆಯ ಎಸೆತಕ್ಕೆ ಭಾರತಕ್ಕೆ 5 ರನ್ಗಳ ಅಗತ್ಯವಿತ್ತು!
ಕೊನೆಯ ಎಸೆತಕ್ಕೆ ಸಿಕ್ಸ್!
ಭಾರತತಂಡದ ಗೆಲುವಿನ ಹೊರೆ ಹೊತ್ತಿದ್ದ ದಿನೇಶ್, ಫೈನಲ್ ಪಂದ್ಯದ ಕೊನೆಯ ಎಸೆತಕ್ಕೆ ಸಿಕ್ಸ್ ಚಚ್ಚಿದರು. ಅಲ್ಲಿಗೆ ಕೇವಲ 8 ಎಸೆತಗಳಿಗೆ ಕಾರ್ತಿಕ್ 29 ರನ್ ಬಾರಿಸಿದ್ದರು. ಭಾರತ ಈ ಪಂದ್ಯದಲ್ಲಿ 20 ಓವರ್ಗೆ 6 ವಿಕೆಟ್ ಕಳೆದು 168 ರನ್ ಪೇರಿಸಿ ರೋಚಕ ಗೆಲುವನ್ನಾಚರಿಸಿತ್ತು.
ಪ್ರೇಕ್ಷಕರ ಬೆಂಬಲದ ಗುಟ್ಟು
ಅವತ್ತಿನ ಪಂದ್ಯದಲ್ಲಿ ಪೆವಿಲಿಯನ್ನಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಭಾರತವನ್ನು ಬೆಂಬಲಿಸಿದ್ದೇಕೆ ಎಂಬುದನ್ನು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾ ಮುಖಾಮುಖಿಯಾಗಿದ್ದವು. ಇದರಲ್ಲಿ ಆತಿಥೇಯ ಶ್ರೀಲಂಕಾ 2 ವಿಕೆಟ್ ಸೋಲನುಭವಿಸಿತ್ತು. ಇದು ಅಲ್ಲಿನ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಹೀಗಾಗಿ ಫೈನಲ್ನಲ್ಲಿ ಪೆವಿಲಿಯನ್ನಲ್ಲಿದ್ದಾ ಪ್ರೇಕ್ಷರೆಲ್ಲರೂ ಬಾಂಗ್ಲಾ ಎದುರಾಳಿ ಭಾರತಕ್ಕೆ ಬೆಂಬಲಿಸಿದ್ದರು, ಹುರಿದುಂಬಿಸಿದ್ದರು. ಇದೂ ಗೆಲುವಿನ ನೆಲೆಯಲ್ಲಿ ನೆರವಾಯ್ತು ಎಂದು ಕಾರ್ತಿಕ್ ವಿವರಿಸಿದರು.