ನವದೆಹಲಿ, ಆಗಸ್ಟ್ 6: ಆಗಸ್ಟ್ 17ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ 2019ರ ದುಲೀಪ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಇಂಡಿಯಾ ಬ್ಲೂ ತಂಡವನ್ನು ಯುವ ಬ್ಯಾಟ್ಸ್ಮನ್ ಶುಬ್ಮಾನ್ ಗಿಲ್ ಮುನ್ನಡೆಸಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ವಿಂಡೀಸ್ ಎ ವಿರುದ್ಧ ಭಾರತ ಎ ಪ್ರತಿನಿಧಿಸಿದ್ದ ಗಿಲ್ ಗಮನಾರ್ಹ ಪ್ರದರ್ಶನ ನೀಡಿದ್ದರು.
ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20: ಕುತೂಹಲಕಾರಿ ಅಂಕಿ-ಅಂಶಗಳು!
ಆಗಸ್ಟ್ 17ರಂದು ಆರಂಭಗೊಂಡು ಸೆಪ್ಟೆಂಬರ್ 8ರಂದು ಮುಕ್ತಾಯಗೊಳ್ಳಲಿರುವ ದುಲೀಪ್ ಟ್ರೋಫಿ ಟೂರ್ನಿಗೆ, ಭಾರತದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್ ಮತ್ತು ಇಂಡಿಯಾ ರೆಡ್ ತಂಡಗಳನ್ನು (ತಂಡಗಳಿಗೆ ಆಟಗಾರರನ್ನು) ಪ್ರಕಟಿಸಿದ್ದಾರೆ.
2003ರ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕ್ ಸೋಲಿಗೆ ಕಾರಣ ಕೊಟ್ಟ ಅಖ್ತರ್
ದುಲೀಪ್ ಟ್ರೋಫಿಗಾಗಿ ಪ್ರಕಟಿತ ಮೂರು ತಂಡಗಳು ಕೆಳಗಿನಂತಿವೆ
ಇಂಡಿಯಾ ಬ್ಲೂ: ಶುಬ್ಮಾನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ರಿಕಿ ಭುಯಿ, ಅನ್ಮೋಲ್ಪ್ರೀತ್ ಸಿಂಗ್, ಅಂಕೀತ್ ಬಾವ್ನೆ, ಸ್ನೆಲ್ ಪಟೇಲ್ (ವಿಕೆ), ಶ್ರೇಯಸ್ ಗೋಪಾಲ್, ಸೌರಭ್ ಕುಮಾರ್, ಜಲಜ್ ಸಕ್ಸೇನಾ, ತುಷಾರ್ ದೇಶಪಾಂಡೆ, ಬೆಸಿಲ್ ತಂಪಿ, ಅಂಕಿತ್ ಚೌಧರಿ, ದಿವೇಶ್ ಪಠಾಣಿಯಾ, ಅಶುತೋಷ್ ಅಮರ್.
ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿ
ಇಂಡಿಯಾ ಗ್ರೀನ್: ಫೈಜ್ ಫಜಲ್ (ನಾಯಕ), ಅಕ್ಷತ್ ರೆಡ್ಡಿ, ಧ್ರುವ್ ಶೋರೆ, ಸಿದ್ಧೇಶ್ ಲಾಡ್, ಪ್ರಿಯಮ್ ಗರ್ಗ್, ಅಕ್ಷದೀಪ್ ನಾಥ್, ರಾಹುಲ್ ಚಾಹರ್, ಧರ್ಮೇಂದ್ರಸಿಂಹ ಜಡೇಜಾ, ಜಯಂತ್ ಯಾದವ್, ಅಂಕಿತ್ ರಾಜಪೂತ್, ಇಶಾನ್ ಪೊರೆಲ್, ತನ್ವೀರ್-ಉಲ್-ಹಕ್, ಅಕ್ಷಯ್ ವಡ್ಕರ್ (ವಿಕೆ), ರಾಜೇಶ್ ಮೊಹಂತಿ, ಮಿಲಿಂದ್ ಕುಮಾರ್.
3ನೇ ಟಿ20ಗೆ ಸ್ಟಾರ್ ಆಲ್ರೌಂಡರ್ ಕಣಕ್ಕಿಳಿಸಲು ವೆಸ್ಟ್ ಇಂಡೀಸ್ ಸಜ್ಜು
ಇಂಡಿಯಾ ರೆಡ್: ಪ್ರಿಯಾಂಕ್ ಪಾಂಚಲ್ (ನಾಯಕ), ಅಭಿಮನ್ಯು ಈಶ್ವರನ್, ಆಕ್ಸರ್ ಪಟೇಲ್, ಕರುಣ್ ನಾಯರ್, ಇಶಾನ್ ಕಿಶನ್ (ವಿಕೆ), ಹಪ್ರೀತ್ ಸಿಂಗ್ ಭಾಟಿಯಾ, ಮಹಿಪಾಲ್ ಲೋಮ್ರರ್, ಆದಿತ್ಯ ಸರ್ವಾತೆ, ಅಕ್ಷಯ್ ವಾಖರೆ, ವರುಣ್ ಆ್ಯರನ್, ರೋನಿತ್ ಮೋರ್, ಜಯದೇವ್ ಉನಾದ್ಕತ್, ಸಂದೇಪ್ ವಾರಿಯರ್, ಅಂಕಿತ್ ಕಲ್ಸಿ.